ಕೋಲ್ಕತ್ತ: ನೋಬೆಲ್ ಪುರಸ್ಕೃತ ಕವಿ ರವೀಂದ್ರನಾಥ ಠಾಗೋರ್ ಅವರ ಲಂಡನ್ ನಿವಾಸವನ್ನು ಖರೀದಿ ಮಾಡಲು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಉತ್ಸುಹುಕರಾಗಿದ್ದಾರೆ.
1912ರಲ್ಲಿ ಠಾಗೋರ್ರವರು ಲಂಡನ್ನಲ್ಲಿನ ನಿವಾಸದಲ್ಲಿ ಕೆಲ ದಿನಗಳನ್ನು ಕಳೆದಿದ್ದರು. ಈ ವೇಳೆ ಅವರು ತಮ್ಮ ಪ್ರಸಿದ್ಧ ’ಗೀತಾಂಜಲಿ’ ಕೃತಿಯನ್ನು ಭಾಷಾಂತರಗೊಳಿಸಿದ್ದರು. ಹೀಗಾಗಿ ಅವರ ಅಭಿಮಾನಿಗಳ ಪಾಲಿಗೆ ಈ ನಿವಾಸ ದೇಗುಲವಾಗಿದೆ.
ಮೂಲಗಳ ಪ್ರಕಾರ ನಾರ್ತ್ ಲಂಡನ್ನ ಹಂಸ್ಟೆಡ್ಹೀತ್ನ ಹೀತ್ ವಿಲ್ಲಾಸ್ನ್ನು ಖರೀದಿ ಮಾಡಿ, ಅದನ್ನು ಮ್ಯೂಸಿಯಂ ಆಗಿ ಪರಿವರ್ತಿಸಲು ಮಮತಾ ಮುಂದಾಗಿದ್ದಾರೆ. ಇದಕ್ಕಾಗಿ ಭಾರತದಲ್ಲಿನ ಬ್ರಿಟನ್ ಹೈಕಮಿಷನರ್ನ್ನು ಭೇಟಿಯಾಗಿ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.