ಚಿಕ್ಕೋಡಿ : ಚಿಕ್ಕೋಡಿ ಪರಟಿನಾಗಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ದಿನಾಂಕ 11-11-2017 ರಂದು ಕರ್ನಾಟಕದ ಧೀಮಂತ ನಾಯಕರಾದ ಪ್ರಭಾಕರ ಬಿ. ಕೋರೆಯವರ ಬಗ್ಗೆ ಹಾಗೂ ಕೆ.ಎಲ್.ಇ. ಸಂಸ್ಥೆಯ ಕುರಿತು ರಾಜ್ಯ ಸರಕಾರದ ಸಚಿವರಾದ ಎಂ.ಬಿ. ಪಾಟೀಲ್ ಅವರು ನವೆಂಬರ್ 5 ರಂದು ಹುಬ್ಬಳ್ಳಿಯಲ್ಲಿ ನಡೆದ ಲಿಂಗಾಯತ ಸಮಾವೇಶದಲ್ಲಿ ಹಗುರವಾಗಿ ಮಾತನಾಡಿ ಹೇಳಿಕೆ ನೀಡಿದ್ದಲ್ಲದೆ, ಬಹಿರಂಗವಾಗಿ ಟೀಕಿಸಿ ಮಾತನಾಡಿ ಅವಮಾನಿಸಿದ್ದಕ್ಕೆ ಸಚಿವರು ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಯಿತು.
ಈ ಪ್ರತಿಭಟನಾ ರ್ಯಾಲಿಯಲ್ಲಿ ನಿಡಸೋಸಿಯ ಮ.ನಿ.ಪ್ರ ಪೂಜ್ಯ ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಗಳು ಸಿದ್ಧಸಂಸ್ಥಾನಮಠ ನಿಡಸೋಸಿ, ಚಿಂಚಣಿಯ ಮ.ನಿ.ಪ್ರ ಪೂಜ್ಯ ಶ್ರೀ ಅಲ್ಲಂಮಪ್ರಭು ಮಹಾಸ್ವಾಮಿಗಳು ಸಿದ್ಧಸಂಸ್ಥಾನಮಠ ಚಿಂಚಣಿ, ಚಿಕ್ಕೋಡಿಯ ಪರಮ ಪೂಜ್ಯ ಶ್ರೀ ಸಂಪಾದನಾ ಮಹಾಸ್ವಾಮಿಗಳು ಚರಮುರ್ತಿಮಠ ಚಿಕ್ಕೋಡಿ, ಕಬ್ಬೂರಿನ ಶ್ರೀ ಷ.ಬ್ರ.ಶ್ರೀ ರೇವಣ್ಣಸಿದ್ಧ ಶಿವಾಚಾರ್ಯ ಮಹಾಸ್ವಾಮಿಗಳು ಗೌರಿಶಂಕರಮಠ ಕಬ್ಬೂರ. ಕಾಗವಾಡ ಶಾಸಕರಾದ ರಾಜು ಕಾಗೆ, ರಾಯಬಾಗ ಶಾಸಕರಾದ ದುರ್ಯೋಧನ ಐಹೋಳೆ, ಕುಡಚಿ ಶಾಸಕರಾದ ಪಿ. ರಾಜೀವ, ಚಿಕ್ಕೋಡಿ ಮಾಜಿ ಶಾಸಕ ಮನೋಹರ ಕಟ್ಟಿಮನಿ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಉಪಾಧ್ಯಕ್ಷರಾದ ಜಗದೀಶ ಕವಟಗಿಮಠ, ಅಖಿಲ ಭಾರತ ವೀರಶೈವ ಮಹಾಸಭೆ, ಅಧ್ಯಕ್ಷರು ಹಾಗೂ ಮಾಜಿ ಜಿ.ಪಂ. ಸದಸ್ಯರಾದ ಮಹೇಶ ಭಾತೆ, ಕರ್ನಾಟಕ ರಾಜ್ಯ ವೀರಶೈವ ಪಂಚಮಸಾಲಿ ಸಂಘದ ಅಧ್ಯಕ್ಷರಾದ ದಾನಪ್ಪ ಬಾಬು ಕೊಟಬಾಗಿ, ದೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆಯ ಉಪಾಧ್ಯಕ್ಷರು, ಭರತ ಬನವಣ್ಣೆ ಹಾಗೂ ಎಲ್ಲ ನಿರ್ದೇಶಕರುಗಳು ಹಾಗೂ ಚಿಕ್ಕೋಡಿ ಪುರಸಭೆ ಸದಸ್ಯರುಗಳಾದ ನಾಗೇಶ ಕಿವುಡ, ಮಹಾದೇವ ವರುಟೆ, ಲಿಯಾಕತ ಡೊಂಗರಖೆ, ಅಸ್ಲಂ ಬೇಪಾರಿ, ನಾಗೇಶ ಮೇದಾರ, ಕೆ.ಎಲ್.ಇ. ಸಂಸ್ಥೆ ನಿರ್ದೇಶಕರಾದ ಬಸವರಾಜ ಪಾಟೀಲ, ಹಾಗೂ ಸತೀಶ ಅಪ್ಪಾಜಿ, ಅಕ್ರಮ ಅರ್ಕಾಟೆ, ಸಂಜಯ ಕವಟಗಿಮಠ, ಹಾಗೂ ಎಲ್ಲ ಪ್ರಭಾಕರ ಕೋರೆ ಅಭಿಮಾನಿಗಳ ಬಳಗದವರು ಹಾಜರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.