ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಜನ್ ಧನ್ ಯೋಜನೆಯಿಂದಾಗಿ ಗ್ರಾಮೀಣ ಭಾಗದ ಜನರ ಅನಗತ್ಯ ಖರ್ಚುಗಳಿಗೆ ಬ್ರೇಕ್ ಬಿದ್ದಿದೆ. ಮದ್ಯವ್ಯಸನ, ತಂಬಾಕುವಿನಿಂತಹ ಹಾನಿಕಾರ ವಸ್ತುಗಳ ಸೇವನೆಯೂ ಕುಂಠಿತವಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಕನಾಮಿಕ್ ರಿಸರ್ಚ್ ವಿಂಗ್ನ ಅಧ್ಯಯನದಿಂದ ತಿಳಿದು ಬಂದಿದೆ.
ಜನ್ಧನ್-ಆಧಾರ್-ಮೊಬೈಲ್(ಜೆಎಎಂ) ಟ್ರನಿಟಿಯಿಂದಾಗಿ ಸರ್ಕಾರದ ಸಬ್ಸಿಡಿಯನ್ನು ಉತ್ತಮವಾಗಿ ಬಳಸಿಕೊಳ್ಳಲು ಮತ್ತು ಅನಗತ್ಯ ವಸ್ತುಗಳಿಗೆ ವ್ಯಯ ಮಾಡುವ ಮನಸ್ಥಿತಿ ದೂರವಾಗಿದೆ ಎಂದು ಅಧ್ಯಯನ ಹೇಳಿದೆ.
ಬಿಹಾರ, ಪಶ್ಚಿಮಬಂಗಾಳ, ಮಹಾರಾಷ್ಟ್ರ, ರಾಜಸ್ಥಾನಗಳಲ್ಲಿ 2016ರ ಅಕ್ಟೋಬರ್ನಿಂದ ವೈದ್ಯಕೀಯ ಖರ್ಚು ಹೆಚ್ಚಾಗಿದೆ. ಜೀವನ ಶೈಲಿ ಬದಲಾವಣೆ ಮತ್ತು ವೈದ್ಯಕೀಯ ಸೇವೆಯ ಬೇಡಿಕೆ ಇದಕ್ಕೆ ಕಾರಣವಾಗಿದೆ ಎಂದಿದೆ.
ಹೆಚ್ಚು ಜನ್ಧನ್ ಅಕೌಂಟ್ ಹೊಂದಿರುವ ಗ್ರಾಮಗಳಲ್ಲಿ ಹಣದುಬ್ಬರ ಕಡಿಮೆ ಮಟ್ಟದಲ್ಲಿ ಇದೆ ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.