ನವದೆಹಲಿ: ಮಾಲಿನ್ಯ ರಹಿತ ಪಟಾಕಿಗಳನ್ನು ತಯಾರಿಸಬೇಕು ಎಂದು ಪರಿಸರ ಸಚಿವ ಡಾ.ಹರ್ಷವರ್ಧನ್ ಭಾರತೀಯ ವಿಜ್ಞಾನಿಗಳಿಗೆ ಕರೆ ನೀಡಿದ್ದಾರೆ.
ಇಂಡಿಯಾ ಗೇಟ್ ಬಳಿ ನಡೆದ ಮಿನಿ ಮ್ಯಾರಥಾನ್ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಮಾಲಿನ್ಯ ರಹಿತ ಪಟಾಕಿಗಳನ್ನು ತಯಾರಿಸಿದರೆ ಜನರು ಯಾವುದೇ ಚಿಂತೆಯಿಲ್ಲದೇ ದೀಪಾವಳಿಯ ಸಂದರ್ಭಗಳಲ್ಲಿ ಪಟಾಕಿಗಳನ್ನು ಸಿಡಿಸಬಹುದು’ ಎಂದಿದ್ದಾರೆ.
‘ಇಂಡಿಯಾ ಇಂಟರ್ನ್ಯಾಷನಲ್ ಸೈನ್ಸ್ ಫೆಸ್ಟಿವಲ್ನಲ್ಲಿ ನಮ್ಮ ವಿಜ್ಞಾನಿಗಳಿಗೆ ಮಾಲಿನ್ಯ ರಹಿತ, ಮಾನವ ದೇಹಕ್ಕೆ ಹಾನಿಯುಂಟು ಮಾಡದಂತಹ ಪಟಾಕಿಗಳನ್ನು ಭವಿಷ್ಯದಲ್ಲಿ ತಯಾರು ಮಾಡುವಂತೆ ಹೇಳಿದ್ದೇವೆ. ಇದರಿಂದ ಜನರಿಗೂ ಖುಷಿ ಮತ್ತು ವ್ಯಾಪಾರಿಗಳಿಗೂ ಒಳ್ಳೆಯದಾಗುತ್ತದೆ’ ಎಂದರು.
ಅ.9ರಂದು ದೆಹಲಿಯಲ್ಲಿ ಪಟಾಕಿ ನಿಷೇಧಿಸುವಂತೆ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ, ದೀಪಾವಳಿಯ ಸಂದರ್ಭದಲ್ಲಿ ಇಂತಹ ಆದೇಶ ಹೊರಡಿಸಲಾಗಿರುವುದಕ್ಕೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.