ಗುರುಗ್ರಾಮ: ಎತ್ತರದ ಕಟ್ಟಡಗಳನ್ನು ಖಿನ್ನತೆಗೊಳಗಾದವರು ಆತ್ಮಹತ್ಯೆ ಮಾಡಿಕೊಳ್ಳಲು ಬಳಸುವುದನ್ನು ತಡೆಗಟ್ಟುವ ಸಲುವಾಗಿ ಹರಿಯಾಣದ ಗುರುಗ್ರಾಮದ ವಿವಿಧ ಸೊಸೈಟಿಗಳ ರಿಸಿಡೆಂಟ್ ವೆಲ್ಫೇರ್ ಅಸೋಸಿಯೇಶನ್ ವಿನೂತನ ಯೋಜನೆಯನ್ನು ಆರಂಭಿಸಿದೆ. ಗುರುಗ್ರಾಮದಲ್ಲಿ ಬಹುಮಹಡಿ ಕಟ್ಟಡಗಳಲ್ಲಿನ ಕಟ್ಟಡದ ರೂಫ್ಟಾಪ್ನ್ನು ಸೋಲಾರ್ ಎಲೆಕ್ಟ್ರಿಸಿಟಿಗಾಗಿ ಬಳಸಿಕೊಳ್ಳಲು ಅದು ನಿರ್ಧರಿಸಿದೆ.
ಸಾಮಾನ್ಯವಾಗಿ ಎತ್ತರದ ಕಟ್ಟಡಗಳ ರೂಫ್ಟಾಪ್ಗಳನ್ನು ವರ್ಷಪೂರ್ತಿ ಲಾಕ್ ಮಾಡುತ್ತಿದೆ, ಆದರೀಗ ರಿಸಿಡೆಂಟ್ ವೆಲ್ಫೇರ್ ಅಸೋಸಿಯೇಶನ್ ಈ ಜಾಗವನ್ನು ಉತ್ತಮ ಕಾರ್ಯಕ್ಕೆ ಬಳಸಲು ಮುಂದಾಗಿದೆ. ಅಲ್ಲಿ ಸೋಲಾರ್ ಎನರ್ಜಿಯನ್ನು ಅಳವಡಿಸುವಂತೆ ಕೋರಲಾಗಿದೆ. ಇದರಿಂದ ವಿದ್ಯುತ್ ಉತ್ಪಾದನೆಯಾಗುತ್ತದೆ. ವಿದ್ಯುತ್ ಅಭಾವ ತಪ್ಪುತ್ತದೆ.
ಪ್ರತಿವರ್ಷ ಗುರುಗ್ರಾಮದ ಎತ್ತರದ ಕಟ್ಟಡಗಳ ರೂಫ್ಟಾಪ್ನಲ್ಲಿ ವರ್ಷಕ್ಕೆ 7ರಿಂದ 8ರಷ್ಟು ಆತ್ಮಹತ್ಯೆಗಳು ನಡೆಯುತ್ತವೆ. ಇಲ್ಲಿ ಒಟ್ಟು 5 ಸಾವಿರ ಬಹು ಮಹಡಿ ಕಟ್ಟಡಗಳಿದ್ದು ಅವುಗಳನ್ನು ಗ್ರೀನ್ ಆಗಿಸಲು ವಿವಿಧ ಸೊಸೈಟಿಗಳು ಮುಂದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.