ತಿರುವನಂತಪುರಂ: ರಾಷ್ಟ್ರಪತಿ ರಮನಾಥ ಕೋವಿಂದ್ ಅವರು ಭಾನುವಾರ ಕೇರಳಕ್ಕೆ ಆಗಮಿಸಿದ್ದು, ರಭಸವಾಗಿ ಮಳೆ ಸುರಿಯುತ್ತಿದ್ದರೂ ಛತ್ರಿಯನ್ನು ಬಳಸದೆಯೇ ತಮಗೆ ಏರ್ಪೋರ್ಟ್ನಲ್ಲಿ ನೀಡಿದ ಗಾಡ್ ಆಫ್ ಹಾನರ್ನ್ನು ಅವರು ಸ್ವೀಕರಿಸಿದರು.
ಭಾರತೀಯ ಸೇನಾಪಡೆಗಳ ಸುಪ್ರೀಂ ಕಮಾಂಡರ್ ಆಗಿರುವ ರಾಷ್ಟ್ರಪತಿಗಳು ಬೆಳಿಗ್ಗೆ 9.30ರ ಸುಮಾರಿಗೆ ತಿರುವನಂತಪುರಂ ಏರ್ಪೋರ್ಟ್ಗೆ ಬಂದಿಳಿದರು. ಅವರನ್ನು ಅಲ್ಲಿನ ಗರ್ವನರ್ ಪಿ.ಸದಾಶಿವಮ್ ಮತ್ತು ಮುಖ್ಯಮಂತ್ರಿ ಪಿನರಾಯಿ ವಿಜಯನ್ ಬರ ಮಾಡಿಕೊಂಡರು.
ರಭಸವಾಗಿ ಮಳೆ ಸುರಿಯುತ್ತಿದ್ದರಿಂದ ಸೆಕ್ಯೂರಿಟಿ ಗಾಡ್ಗಳು ಛತ್ರಿ ತಂದು ಕೊಟ್ಟರೂ ಅದನ್ನು ಬಳಸದ ಕೋವಿಂದ್ ಅವರು ಶಾಮಿಯಾನದಡಿ ನೀಡಿದ ಗಾರ್ಡ್ ಆಫ್ ಹಾನರ್ನ್ನು ಸ್ವೀಕರಿಸಿ ಸರಳತೆ ಪ್ರದರ್ಶಿಸಿದರು.
ಬಳಿಕ ಕೊಲ್ಲಂನಲ್ಲಿ ಆಧ್ಯಾತ್ಮ ಗುರು ಅಮೃತಾನಂದ ಮಯಿ ಅವರ ಜನ್ಮದಿನದ ಪ್ರಯುಕ್ತ ನಡೆದ ಸಮಾರಂಭದಲ್ಲಿ ಭಾಗಿಯಾದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.