ನವದೆಹಲಿ: ದೇಶದ ಆರ್ಥಿಕ ನೀತಿಯನ್ನು ಟೀಕಿಸುತ್ತಿರುವವರ ವಿರುದ್ಧ ಕಿಡಿಕಾರಿರುವ ಪ್ರಧಾನಿ ನರೇಂದ್ರ ಮೋದಿ, ಕೇವಲ ಒಂದು ತ್ರೈಮಾಸಿಕದಲ್ಲಿ ಆದ ಆರ್ಥಿಕ ಕುಸಿತವನ್ನು ಮುಂದಿಟ್ಟುಕೊಂಡು ಕೆಲವರು ನಿರಾಶಾವಾದವನ್ನು ಹರಡಿಸುತ್ತಿದ್ದಾರೆ ಎಂದಿದ್ದಾರೆ.
ದೆಹಲಿಯಲ್ಲಿ ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿಯೇಟ್ಸ್ನ ಸುವರ್ಣಮಹೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎರಡು ತ್ರೈಮಾಸಿಕವನ್ನು ಗಮನದಲ್ಲಿಟ್ಟುಕೊಂಡು ಟೀಕಾಕಾರರು ಟೀಕೆ ಮಾಡುತ್ತಿದ್ದಾರೆ, ಆದರೆ ಅವರು ಯುಪಿಎ ಅವಧಿಯಲ್ಲಿ ಇದ್ದ ಶೇ.10ರಷ್ಟು ಹಣದುಬ್ಬರವನ್ನು ಎನ್ಡಿಎ ಶೇ.2.5ಕ್ಕೆ ಇಳಿಸಿದೆ, ಕರೆಂಟ್ ಅಕೌಂಟ್ ಡೆಫಿಸಿಟ್ನ್ನು ಶೇ.4ರಿಂದ ಶೇ.1ಕ್ಕೆ ಇಳಿಸಿದೆ ಮತ್ತು ಫಿಸ್ಕಲ್ ಡೆಫಿಸಿಟ್ನ್ನು ಶೇ.4.5 ರಿಂದ ಶೇ.3.5ಕ್ಕೆ ಇಳಿಸಿದೆ ಎಂಬ ಸತ್ಯವನ್ನು ಮರೆಮಾಚುತ್ತಿದ್ದಾರೆ ಎಂದು ಆರೋಪಿಸಿದರು.
ಆರ್ಥಿಕ ಪ್ರಗತಿಯ ಕುಸಿತ ನಿರಾಶಾವಾದಿಗಳಿಗೆ ಉತ್ತೇಜನ ನೀಡಿದೆ. ಆದರೆ ಆರ್ಥಿಕತೆ ಕುಸಿತವಾಗಿರುವುದು ಇದೇ ಮೊದಲಲ್ಲ, ಯುಪಿಎ ಅವಧಿಯಲ್ಲಿ 8 ಬಾರಿ ಜಿಡಿಪಿ ಶೇ.5.7ಕ್ಕೆ ಕುಸಿತವಾಗಿತ್ತು ಎಂದಿದ್ದಾರೆ.
3 ವರ್ಷಗಳಿಂದ ನಮ್ಮ ಸರ್ಕಾರ ಶೇ.7.5ರಷ್ಟು ಜಿಡಿಪಿಯನ್ನು ಸಾಧಿಸಿದೆ. ಈಗ ಕಂಡಿರುವ ಕುಸಿತವನ್ನು ಮೇಲೆತ್ತಲು ಸರ್ಕಾರ ಎಲ್ಲಾ ಕ್ರಮಕೈಗೊಳ್ಳಲಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.