ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾದ ಬಳಿಕ ಎಲ್ಲಾ ವಿಚಾರವಾದಿಗಳು ಹಿಂದುತ್ವ ಸಂಘಟನೆಗಳ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಸುತ್ತಾ ಬಂದಿದ್ದಾರೆ. ಈ ಧೋರಣೆಯನ್ನು ಸನಾತನ ಸಂಸ್ಥೆ ಕಟುವಾಗಿ ಖಂಡಿಸಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಸನಾತನ ಸಂಸ್ಥೆ, ಪ್ರಕರಣದಲ್ಲಿ ನಮ್ಮ ಯಾವುದೇ ಕೈವಾಡವಿಲ್ಲ, ತನಿಖೆಗೆ ಸಂಪೂರ್ಣ ಸಹಕಾರ ನೀಡಲು ಬದ್ಧರಿದ್ದೇವೆ ಎಂದಿದೆ.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸನಾತನ ಸಂಸ್ಥೆ ಗೋವಾ ವಕ್ತಾರ ಚೇತನ್ ರಾಜಹಂಸ, ’ಗೌರಿ ಹತ್ಯೆಯನ್ನು ಖಂಡಿಸುತ್ತೇವೆ. ಆದರೆ ಇದರ ಆರೋಪವನ್ನು ಸನಾತನ ಸಂಸ್ಥೆ ಸೇರಿದಂತೆ ಹಿಂದೂ ಸಂಘಟನೆಗಳ ಮೇಲೆ ಹೊರಿಸುವುದು ಸರಿಯಲ್ಲ. ಅಭಿಪ್ರಾಯಗಳು ಬೇರೆ ಬೇರೆ ಇದ್ದವು ಎಂಬ ಕಾರಣಕ್ಕೆ ನಮ್ಮ ಮೇಲೆ ಕೊಲೆ ಆರೋಪ ಹೊರಿಸಬಾರದು’ ಎಂದಿದ್ದಾರೆ.
ಕೊಲೆಯ ಬಗ್ಗೆ ತನಿಖೆಯಲ್ಲಿ ಇದುವರೆಗೆ ಒಂದೇ ಒಂದು ಸಾಕ್ಷಿ ಸಿಕ್ಕಿಲ್ಲ. ಆದರೂ ರಾಜಕಾರಣಿಗಳು, ಪುರೋಹಿತ ವಿರೋಧಿ ವಿಚಾರವಂತರು ಪದೇ ಪದೇ ಹಿಂದೂ ಸಂಘಟನೆಗಳ ಹೆಸರನ್ನು ಹೇಳುತ್ತಿದ್ದಾರೆ. ಪನ್ಸಾರೆ, ದಭೋಲ್ಕರ್ ಹತ್ಯೆಗೂ ಗೌರಿ ಹತ್ಯೆಗೂ ಸಾಮ್ಯತೆ ಇದೆ ಎನ್ನುತ್ತಾರೆ. ಆದರೆ ಅದೇ ಮಾದರಿಯನ್ನು ಅನುಸರಿಸಿ ಇನ್ನೊಬ್ಬರು ಕೊಲೆ ನಡೆಸಿರಬಹುದಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.
ಪನ್ಸಾರೆ, ದಭೋಲ್ಕರ್ ಕುಟುಂದವರ ಒತ್ತಡಕ್ಕೆ ಮಣಿದು ಒಂದೇ ಆಯಾಮದಲ್ಲಿ ತನಿಖೆಯನ್ನು ನಡೆಸಲಾಗುತ್ತಿದೆ. ಇದಕ್ಕಾಗಿಯೇ ಹೈಕೋರ್ಟ್ ಪದೇ ಪದೇ ಛೀಮಾರಿ ಹಾಕುತ್ತಿದೆ. ಆರೋಪಿಗಳು ಇದುವರೆಗೂ ಪತ್ತೆಯಾಗಿಲ್ಲ. ಗೌರಿ ಪ್ರಕರಣಕ್ಕೂ ಇದೇ ಗತಿ ಬರದಿರಲಿ. ಕುಟುಂಬ ಕಲಹ, ನಕ್ಸಲ್ವಾದ, ಆಸ್ತಿ ವಿವಾದ, ಸ್ಥಳಿಯ ವೈಷಮ್ಯ ಹೀಗೆ ಎಲ್ಲಾ ಆಯಾಮದಲ್ಲೂ, ಪೂರ್ವಾಗ್ರಹಪೀಡಿತರಾಗದೆ, ಎಡಪಂಥೀಯರ ಪ್ರಭಾವಕ್ಕೆ ಒಳಗಾಗದೆ ತನಿಖೆ ನಡೆಯಲಿ ಎಂದು ಅವರು ಕೋರಿದ್ದಾರೆ.
ಸನಾತನ ಸಂಸ್ಥೆಗಳ ಮೇಲೆ ಎಸ್ಐಟಿ ದಾಳಿ ನಡೆಸಿದೆ ಎಂದು ಸುಳ್ಳು ಸುದ್ದಿ ಬಿತ್ತರಿಸಿದವರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಅವರು ತಿಳಿಸಿದ್ದಾರೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.