ಒಂದು ಕಾಲದಲ್ಲಿ ಶಾಲೆ ತೊರೆದು ಶಿಕ್ಷಣದಿಂದ ವಂಚಿತರಾದ ಮಕ್ಕಳು ಇಂದು ನೂರಾರು ಶಿಕ್ಷಣ ವಂಚಿತ ಮಕ್ಕಳ ಬದುಕಿಗೆ ಆಶಾಕಿರಣವಾಗುತ್ತಿದ್ದಾರೆ. ತಮ್ಮ ಶಕ್ತಿಮಾನ್ ಸಂಸ್ಥೆಯ ಮೂಲಕ ಬಾಲ ಕಾರ್ಮಿಕತನ, ಬಾಲ್ಯ ವಿವಾಹಗಳ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ.
ಕೋಲ್ಕತ್ತಾದ ಸ್ಲಂ ‘ಇಜೆಸಿ ಬಸ್ತಿ’ಯ ನಲ್ಲಿ ಪೋಷಕರ ಬಡತನದಿಂದಾಗಿ ಶಾಲೆಯನ್ನು ತೊರೆದು ಕೆಲಸಕ್ಕೆ ಹೋಗುತ್ತಿರುವ ನೂರಾರು ಮಕ್ಕಳನ್ನು ಮರಳಿ ಶಾಲೆಗೆ ಕಳುಹಿಸುತ್ತಿದ್ದಾರೆ ಸೋನಿ ಮತ್ತು ಸರಸ್ವತಿ. ಈ ಎರಡು ಹೆಸರುಗಳು ಇಂದು ಬಸ್ತಿಯಲ್ಲಿ ಚಿರಪರಿಚಿತವಾಗಿದೆ.
ಶಕ್ತಿಮಾನ್ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿರುವ ಇವರು ಇಂದು ಬಾಲ್ಯ ವಿವಾಹ, ಬಾಲ ಕಾರ್ಮಿಕತನಕ್ಕೆ ಒಳಗಾಗಿರುವ ಮಕ್ಕಳನ್ನು ಪತ್ತೆ ಮಾಡಿ ಅವರನ್ನು ಮರಳಿ ಶಾಲೆಗೆ ಕಳುಹಿಸಿಕೊಡುತ್ತಿದ್ದಾರೆ. ಹಲವಾರು ಮಕ್ಕಳನ್ನು ತಮ್ಮ ಸಂಸ್ಥೆಗೆ ಸೇರ್ಪಡಿಸಿರುವ ಇವರು ತಮ್ಮ ಹೋರಾಟವನ್ನು ಸಕ್ರಿಯವಾಗಿ ಮುಂದುವರೆಸುತ್ತಿದ್ದಾರೆ.
ಬಾಲ್ಯ ವಿವಾಹಕ್ಕೆ ಒಳಪಡುವ ಹಂತದಲ್ಲಿದ್ದ ಹಲವು ಮಕ್ಕಳನ್ನು ಇವರು ರಕ್ಷಿಸಿದ್ದಾರೆ. ಅಲ್ಲದೇ ಗ್ಯಾರೇಜ್, ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಮಕ್ಕಳನ್ನು ರಕ್ಷಿಸಿ ಮರಳಿ ಶಾಲೆಗೆ ಕಳುಹಿಸಿಕೊಟ್ಟಿದ್ದಾರೆ. ಸಮೀಕ್ಷೆಗಳ ಮೂಲಕ ಯೋಜನಾಬದ್ಧವಾಗಿ ತಮ್ಮ ಹೋರಾಟಗಳನ್ನು ಮುಂದುವರೆಸುತ್ತಿರುವ ಇವರ ಕಾರ್ಯ ಸ್ಥಳಿಯರ ಭಾರೀ ಬೆಂಬಲವೂ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.