ರಾಯ್ಪುರ: 5 ರೂಪಾಯಿಗೆ ಪೌಷ್ಠಿಕ ಆಹಾರಗಳನ್ನು ಕಾರ್ಮಿಕರಿಗೆ ಒದಗಿಸುವ ಸಲುವಾಗಿ ಛತ್ತೀಸ್ಗಢ ಮುಖ್ಯಮಂತ್ರಿ ರಮಣ್ ಸಿಂಗ್ ಅವರು ‘ಪಂಡಿತ್ ದೀನ್ದಯಾಳ್ ಉಪಧ್ಯಾಯ ಶ್ರಮ ಅನ್ನ ಸಹಾಯತ ಯೋಜನಾ’ವನ್ನು ಆರಂಭಿಸಿದ್ದಾರೆ.
ಈ ಯೋಜನೆಯಡಿ 27 ಜಿಲ್ಲೆಗಳಲ್ಲಿ 60 ಕ್ಯಾಂಟೀನ್ಗಳನ್ನು ತೆರೆಯಲಾಗುತ್ತದೆ, ಈ ಕ್ಯಾಂಟೀನ್ಗಳಲ್ಲಿ ದಿನನಿತ್ಯ 60 ಸಾವಿರ ಕಾರ್ಮಿಕರಿಗೆ ಆಹಾರವನ್ನು ಒದಗಿಸಲಾಗುತ್ತದೆ. ಕ್ಯಾಂಟೀನ್ನಲ್ಲೇ ತಿನ್ನುವ ಅಥವಾ ಟಿಫಿನ್ಗಳಿಗೆ ಇಲ್ಲಿನ ಆಹಾರಗಳನ್ನು ಹಾಕಿಕೊಂಡು ಹೋಗುವ ಅವಕಾಶವನ್ನು ಕಾರ್ಮಿಕರಿಗೆ ನೀಡಲಾಗಿದೆ.
ಮೊದಲ ಶ್ರಮ್ ಅನ್ನ ಸಹಾಯತ ಸೆಂಟರ್ನ್ನು ಛತ್ತೀಸ್ಗಢದ ತೆಲಿಬಂಧ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿದೆ, ಸುಮಾರು 1 ಸಾವಿರ ಕಾರ್ಮಿಕರಿಗೆ ಅನ್ನ ನೀಡಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.