ಶ್ರೀನಗರ: ಲಷ್ಕರ್-ಇ-ತೋಯ್ಬಾ ಉಗ್ರ ಮತ್ತು ಅಮರನಾಥ ಯಾತ್ರಿಕ ಮೇಲಿನ ದಾಳಿಯ ಮಾಸ್ಟರ್ ಮೈಂಡ್ ಅಬು ಇಸ್ಮಾಯಿಲ್ನನ್ನು ಸೇನಾಪಡೆಗಳು ಹೊಡೆದುರುಳಿಸಿವೆ. ಸೇನೆಯ ಈ ಕಾರ್ಯಕ್ಕೆ ರಕ್ಷಣಾ ತಜ್ಞರು ಶಹಬ್ಬಾಸ್ ನೀಡಿದ್ದಾರೆ.
ಜುಲೈ ತಿಂಗಳಲ್ಲಿ ಅಮರನಾಥ ಯಾತ್ರಿಕ ಮೇಲೆ ನಡೆದ ದಾಳಿಯ ರುವಾರಿಯಾಗಿದ್ದ ಅಬು ಇಸ್ಮಾಯಿಲ್ನನ್ನು ಬಂಧಿಸಲು ಅಥವಾ ಕೊಂದು ಹಾಕಲು ಸೇನಾ ಪಡೆಗಳು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದವು. ಗುರುವಾರ ಈ ಪ್ರಯತ್ನಕ್ಕೆ ಮೆಗಾ ಸಕ್ಸಸ್ ಸಿಕ್ಕಿದ್ದು, ಅಬು ಹತ್ಯೆಗೀಡಾಗಿದ್ದಾನೆ.
ಈತ ನಡೆಸಿದ್ದ ದಾಳಿಯಲ್ಲಿ 7 ಯಾತ್ರ್ರಿಕರು ಮೃತಪಟ್ಟು, 15 ಮಂದಿ ಗಾಯಗೊಂಡಿದ್ದರು.
ಸೇನೆಯ ಕಾರ್ಯವನ್ನು ರಕ್ಷಣಾ ತಜ್ಞರಾದ ಪಿ.ಕೆ.ಸೆಹಗಲ್, ಕಮರ್ ಅಘಾ ಕೊಂಡಾಡಿದ್ದು, ಇದೊಂದು ಮಹತ್ವದ ಸಕ್ಸಸ್ ಎಂದು ಬಣ್ಣಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.