ನವದೆಹಲಿ: ಒರ್ವ ಉತ್ತಮ ಕ್ರಿಶ್ಚಿಯನ್ ಆದವನು ಏನು ಮಾಡಬೇಕೋ ಅದನ್ನು ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿದ್ದಾರೆ ಎಂದು ಕೇಂದ್ರದ ನೂತನ ಸಚಿವ ಅಲ್ಫೋನ್ಸ್ ಕನ್ನನ್ತಾನಂ ಹೇಳಿದ್ದಾರೆ.
ಕೊಚ್ಚಿಯಲ್ಲಿ ಸಾರ್ವಜನಿಕ ಸಮಾರಂಭವೊಂದನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಕ್ರಿಶ್ಚಿಯನ್ ಆಗಿ ಬಿಜೆಪಿಯನ್ನು ಯಾಕೆ ಸೇರಿದಿರಿ ಎಂದು ಜನರು ನನ್ನನ್ನು ಕೇಳುತ್ತಾರೆ. ಅವರಿಗೆ ನನ್ನ ಉತ್ತರವೇನೆಂದರೆ ಒರ್ವ ಒಳ್ಳೆಯ ಕ್ರಿಶ್ಚಿಯನ್ ಏನು ಮಾಡಬೇಕೋ ಅದನ್ನು ಮೋದಿ ಮಾಡುತ್ತಿದ್ದಾರೆ ಎಂಬುದಾಗಿದೆ. ಎಲ್ಲಾ ಜನರು ಘನತೆಯಿಂದ ಬಾಳಬಹುದಾದ ಹೊಸ ಭಾರತ ನಿರ್ಮಿಸುವ ಮೋದಿಯ ಕನಸನ್ನು ನನಸಾಗಿಸಲು ನನ್ನಿಂದ ಏನು ಮಾಡಬಹುದೋ ಅದನ್ನು ನಾನು ಮಾಡುತ್ತೇನೆ’ ಎಂದಿದ್ದಾರೆ.
‘ಕೋಟ್ಯಾಂತರ ಬಡವರು ಇರುವ ದೇಶವನ್ನು ಬಿಜೆಪಿ ಆಳುತ್ತಿದೆ. ಕೇರಳದ ಪ್ರತಿಯೊಬ್ಬರೂ ಸಹಕಾರ ನೀಡಿ ತಮ್ಮ ರಾಜ್ಯದಲ್ಲೂ ಬದಲಾವಣೆಯ ಪ್ರತಿಫಲನಗೊಳ್ಳುವಂತೆ ಮಾಡಬೇಕು’ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.