ಶ್ರೀನಗರ: ‘ವಾದಿ -ಇ-ಕಾಶ್ಮೀರ್’ ಎಂಬ ಕಾಶ್ಮೀರದ ಶ್ರೇಷ್ಠತೆ ಮತ್ತು ಏಕತೆಯನ್ನು ಬಿಂಬಿಸುವ ಕಿರುಚಿತ್ರವನ್ನು ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ಸಂಸದೆ ಹೇಮಾ ಮಾಲಿನಿ ಲೋಕಾರ್ಪಣೆ ಮಾಡಿದರು.
ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರು ಪರಿಚಯ ನೀಡುವುದರ ಮೂಲಕ 1 ನಿಮಿಷಗಳ ಈ ಕಿರುಚಿತ್ರ ಆರಂಭಗೊಳ್ಳುತ್ತದೆ, ಕಣಿವೆಯ ಮನಮೋಹಕ ಪ್ರಕೃತಿ, ತಾಜಾತನ, ಬದುಕು, ಸೌಂದರ್ಯವನ್ನು ಇದರಲ್ಲಿ ಅಮೋಘವಾಗಿ ಚಿತ್ರಿಸಲಾಗಿದೆ.
ಈ ಕಿರುಚಿತ್ರಕ್ಕೆ ಶಂಕರ್ ಮಹಾದೇವನ್ ಅವರ ಹಿನ್ನಲೆ ಗಾಯನವಿದೆ. ಶಂಕರ್-ಇಶಾನ್ ಇದನ್ನು ಕಂಪೋಸ್ ಮಾಡಿದ್ದಾರೆ. ಜುಲ್ಝರ್ ಅವರ ಸಾಹಿತ್ಯವಿದೆ.
ಕಾಶ್ಮೀರದ ಜನತೆಗೆ ನಿಮ್ಮೊಂದಿಗೆ ಇಡೀ ದೇಶವೇ ಇದೆ ಎಂಬುದನ್ನು ಅರ್ಥ ಮಾಡಿಕೊಡುವುದು ಇದರ ಉದ್ದೇಶ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.