ನವದೆಹಲಿ: ಚಿಕಾಗೋದಲ್ಲಿ ನಡೆದ ವಿಶ್ವ ಧರ್ಮ ಸಮ್ಮೇಳದಲ್ಲಿ ಸ್ವಾಮಿ ವಿವೇಕಾನಂದರು ಮಾಡಿದ ಐತಿಹಾಸಿಕ ಭಾಷಣಕ್ಕೆ ಇಂದಿಗೆ 125 ವರ್ಷ. ಈ ಅವಿಸ್ಮರಣೀಯ ಭಾಷಣದ ಪ್ರಯುಕ್ತ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಧೀಮಂತ ಆಧ್ಯಾತ್ಮ ನಾಯಕನಿಗೆ ಗೌರವಾರ್ಪಣೆ ಮಾಡಿದ್ದಾರೆ.
ವಿವೇಕಾನಂದ ಭಾಷಣದ ಸ್ಮರಣಾರ್ಥವಾಗಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಸೆಂಟನರಿ ಸೆಲೆಬ್ರೇಶನ್ ಹಾಲ್ನಲ್ಲಿ ನಡೆದ ’ಯಂಗ್ ಇಂಡಿಯಾ, ನ್ಯೂ ಇಂಡಿಯಾ’ ಥೀಮ್ನ ಸ್ಟುಡೆಂಟ್ ಕನ್ವಿನ್ಷನ್ ಏರ್ಪಟ್ಟಿದ್ದು, ಇದರಲ್ಲಿ ಮೋದಿ ಪ್ರಮುಖ ಭಾಷಣ ಮಾಡಿದರು.
ಈ ವೇಳೆ ಮಾತನಾಡಿದ ಮೋದಿ, ’ಭಾರತ ಬದಲಾಗುತ್ತಿದೆ , ಜಾಗತಿಕ ವೇದಿಕೆಯಲ್ಲಿ ಭಾರತದ ಹಾಜರಾತಿ ಹೆಚ್ಚಾಗುತ್ತಿದೆ. ಇದು ಜನಶಕ್ತಿಯಿಂದ ಸಾಧ್ಯವಾಯಿತು’ ಎಂದರು.
ಸೃಜನಶೀಲತೆಯಿಲ್ಲದೆ ಬದುಕಿಲ್ಲ. ನಮ್ಮ ಸೃಜನಶೀಲತೆ ನಮ್ಮ ದೇಶವನ್ನು ಬಲಿಷ್ಠಗೊಳಿಸಲಿ, ನಮ್ಮ ಜನರ ಆಶೋತ್ತರಗಳನ್ನು ಪೂರೈಸಲಿ. ಸೃಜನಶೀಲತೆಗೆ ಮತ್ತು ನಾವೀಣ್ಯತೆಗೆ ವಿಶ್ವವಿದ್ಯಾಲಯಗಳ ಕ್ಯಾಂಪಸ್ಗಳಿಗಿಂತ ಮಿಗಿಲಾದ ಜಾಗ ದೊರೆಯಲಾರದು ಎಂದರು.
ವಿವೇಕಾನಂದರು ‘ಏಕ ಏಷ್ಯಾ’ದ ಪರಿಕಲ್ಪನೆ ನೀಡಿದರು. ಜಗತ್ತಿನ ಎಲ್ಲಾ ಸಮಸ್ಯೆಗಳಿಗೂ ಏಷ್ಯಾದಲ್ಲಿ ಉತ್ತರವಿದೆ ಎಂದರು. ಈಗ ಜಗತ್ತು 21ನೆ ಶತಮಾನ ಏಷ್ಯಾದ್ದು ಎಂದು ಹೇಳುತ್ತಿದೆ. ಅವರ ಚಿಂತನೆಗಳತ್ತ ನಾವಿಂದು ನೋಡಬೇಕಿದೆ’ ಎಂದರು.
ವಿವೇಕಾನಂದರು ಚಿಂತನೆಗಳನ್ನು ಸಿದ್ಧಾಂತಗಳಾಗಿ ಪರಿವರ್ತಿಸಿದರು. ಸಾಂಘಿಕ ಕಾರ್ಯಸೂಚಿ ರಚಿಸಿದರು. ಅವರು ರಾಮಕೃಷ್ಣ ಪರಮಹಂಸ ಆಶ್ರಮಕ್ಕೆ ಜನ್ಮ ನೀಡಿದರೇ ಹೊರತು ವಿವೇಕಾನಂದ ಆಶ್ರಮಕ್ಕೆ ಅಲ್ಲ ಎಂದರು.
ಗುರುವಿನ ಶೋಧನೆಗಿಂತಲೂ ಹೆಚ್ಚಾಗಿ ವಿವೇಕಾನಂದರು ಸತ್ಯ ಶೋಧನೆ ಮಾಡಿದರು. ಅವರು ಜನ ಸೇವೆಯೇ ಪ್ರಭು ಸೇವೆ ಎಂದರು. ನಮ್ಮ ಸಮಾಜವನ್ನು ಪ್ರವೇಶಿಸಿದ ಮೌಢ್ಯಗಳ ವಿರುದ್ಧ ಅವರು ಹೋರಾಡಿದರು ಎಂದಿದ್ದಾರೆ.
9/11 ದಿನಾಂಕ 2001ರ ಬಳಿಕ ಸುದ್ದಿಯಾಯಿತು. ಆದರೆ 1893ರ 9/11ರ ದಿನವನ್ನು ಎಲ್ಲರೂ ಸ್ಮರಿಸುತ್ತಾರೆ. 125ವರ್ಷಗಳ ಹಿಂದೆ 9/11ದು ನಮ್ಮ ದೇಶದ ‘ಕಾವಿ ವಸ್ತ್ರ’ ತೊಟ್ಟ ಮನುಷ್ಯ ಇಡೀ ಜಗತ್ತಿಗೆ ಪರಿಚಯಿಸಲ್ಪಟ್ಟ ದೇಶದ ಶಕ್ತಿಯನ್ನು ಜಗತ್ತಿಗೆ ತೋರಿಸಿದರು. ಈ ದಿನ ಪ್ರೀತಿ, ಸೌಹಾರ್ದತೆಯ ದಿನ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.