ಅಡಿಟೋರಿಯಮ್ ಕಾಯ್ದಿರಿಸಿದ್ದರೂ, ಕೊನೇ ಕ್ಷಣದಲ್ಲಿ ಬುಕಿಂಗ್ ರದ್ದು
ಕೋಲ್ಕತಾ: ಇದೇ ಜನನವರಿಯಲ್ಲಿ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ರ್ಯಾಲಿಗೆ ಕೋಲ್ಕತಾ ಪೊಲೀಸರು ಅನುಮತಿ ನೀಡದ ಬೆನ್ನಲ್ಲೇ ಈಗ ಸರ್ಕಾರಿ ಸ್ವಾಮ್ಯದ ಅಡಿಟೋರಿಯಮ್ ಒಂದು ಮೋಹನ್ ಭಾಗವತ್ ಮಾತನಾಡಬೇಕಿದ್ದ ಕಾರ್ಯಕ್ರಮಕ್ಕೆ ಮಾಡಲಾಗಿದ್ದ ಬುಕಿಂಗ್ನ್ನು ಕೊನೆಯ ಕ್ಷಣದಲ್ಲಿ ರದ್ದುಮಾಡಿದೆ.
ಕೊಲ್ಕತ್ತಾದಲ್ಲಿ ಸರ್ಕಾರಿ ಸ್ವಾಮ್ಯದ ಮಹಜತಿ ಸದನ್ ಅಡಿಟೋರಿಯಮ್ನಲ್ಲಿ ಅಕ್ಟೋಬರ್ ತಿಂಗಳಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಭಾಗವಹಿಸಿ ಮಾತನಾಡುವವರಿದ್ದರು. ಆದರೆ ಇದೀಗ ಮಹಾಜತಿ ಸದನ್ನ ಅಧಿಕಾರಿಗಳು ಬುಕಿಂಗ್ನ್ನು ರದ್ದು ಮಾಡಿದ್ದಾರೆ ಎನ್ನಲಾಗಿದೆ.
ಜನವರಿಯಲ್ಲಿ ರ್ಯಾಲಿಗೆ ಅನುಮತಿ ನೀಡದ ಪೊಲೀಸರು ನೀಡಿದ ಕಾರಣ “ಭದ್ರತೆಯ ದೃಷ್ಟಿಯಿಂದ ಮತ್ತು ಸಮಾಜದ ಹಿತದೃಷ್ಟಿ ಕಾಪಾಡಲು”. ಆದರೆ, ಕೊಲ್ಕತ್ತಾ ಹೈಕೊರ್ಟ್, ಕೋಲ್ಕತ್ತಾದ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ಮೋಹನ್ ಭಾಗವತ್ ರವರ ರ್ಯಾಲಿ ನಡೆಸಲು ಅನುಮತಿ ನೀಡುವ ಮೂಲಕ, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರ ದೊಡ್ಡ ಅವಮಾನ ಅನುಭವಿಸುವಂತಾಯಿತು.
ಡಿಸೆಂಬರ್ 2014 ರಲ್ಲಿ, ಮೋಹನ್ ಭಾಗವತ್ ಭಾಗವಹಿಸಬೇಕಿದ್ದ ವಿಶ್ವ ಹಿಂದೂ ಪರಿಷತ್ನ ರ್ಯಾಲಿಗೆ ಕೋಲ್ಕತಾದಲ್ಲಿ ಅನುಮತಿ ನಿರಾಕರಿಸಿತು. ಆದರೆ, ಉಚ್ಛ ನ್ಯಾಯಾಲಯ ವಿಎಚ್ಪಿ ರ್ಯಾಲಿಗೆ ಅನುಮತಿ ನೀಡಿತು ಮತ್ತು ಅದರಲ್ಲಿ ಮೋಹನ್ ಭಾಗವತ್ ‘ಘರ್ ವಾಪಸಿ’ಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದರು.
ವಿಎಚ್ಪಿ ರ್ಯಾಲಿಯ ಒಂದು ತಿಂಗಳ ಹಿಂದೆಯಷ್ಟೆ, ಮಮತಾ ಬ್ಯಾನರ್ಜಿ ಸರ್ಕಾರ ಬಿಜೆಪಿಯ ರಾಜಕೀಯ ರ್ಯಾಲಿಗೆ ಅನುಮತಿ ನಿರಾಕರಿಸಿತ್ತು. ಆದರೆ ಪೊಲೀಸರ ಕ್ರಮ ಪ್ರಶ್ನಿಸಿ ಬಿಜೆಪಿ ಕೊಲ್ಕತಾ ಉಚ್ಛ ನ್ಯಾಯಾಲಯದ ಮೊರೆ ಹೋಗಿ ಅನುಮತಿ ಪಡೆದುಕೊಂಡಿತ್ತು. ನಂತರ ಬಿಜೆಪಿ ಅಧ್ಯಕ್ಷ ಅಮಿತ್ ಷಾ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಕ್ಪ್ರಹಾರ ನಡೆಸಿದ್ದರು.
ಮಮತಾ ಬ್ಯಾನರ್ಜಿ ಕೇಂದ್ರದ ನರೇಂದ್ರ ಮೋದಿ ಸರ್ಕಾರದ ದೊಡ್ಡ ಟೀಕಾಕಾರರಾಗಿದ್ದಾರೆ. ಅವರು ರೂ.500 ಹಾಗೂ ರೂ. 1000 ನೋಟ್ ಬ್ಯಾನ್ ವೇಳೆ ಪ್ರತಿಭಟಿಸಿ ಬೀದಿಗೆ ಇಳಿದಿದ್ದರು. ಭಾರೀ ಸುದ್ದಿ ಮಾಡಿದ್ದ GST ಗೂ ವಿರೋಧ ವ್ಯಕ್ತಪಡಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.