ನವದೆಹಲಿ: ಪ್ರಸಾರ ಭಾರತಿಯ ಸಿಇಓ ಶಶಿ ಶೇಖರ್ ವಂಪಥಿ ಅವರು ‘ಮನ್ ಕೀ ಬಾತ್’ ಮೇಲಿನ ಕಾರ್ಪೋರೇಟ್ ಪುಸ್ತಕವನ್ನು ಅನಾವರಣಗೊಳಿಸಿದರು.
ಈ ವೇಳೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ‘ಮನ್ ಕೀ ಬಾತ್’ ಕಾರ್ಯಕ್ರಮ ಸಾಮಾನ್ಯರನ್ನು ತಲುಪುವ ಅತ್ಯುನ್ನತ ಕಾರ್ಯಕ್ರಮವಾಗಿದೆ ಎಂದರು.
ವಿದೇಶಿ ಮಾಧ್ಯಮಗಳು ಭಾರತದ ಬಗ್ಗೆ ನಕಾರಾತ್ಮಕವಾಗಿ ವರದಿ ಮಾಡುತ್ತಿರುವ ಈ ಸಂದರ್ಭದಲ್ಲಿ ಭಾರತದ ಬಗ್ಗೆ ಸಕರಾತ್ಮಕ ವರದಿಗಳನ್ನು ಮಾಡುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ‘ಮನ್ ಕೀ ಬಾತ್’ ಉತ್ತಮ ಬದಲಾವಣೆಯನ್ನು ತರುತ್ತಿದೆ ಎಂದರು.
ದಿನನಿತ್ಯದ ಬದುಕಿನಲ್ಲಿ ಹೀರೋಗಳಾಗಿರುವವರ ಬಗ್ಗೆ ಮೋದಿ ‘ಮನ್ ಕೀ ಬಾತ್’ನಲ್ಲಿ ಉಲ್ಲೇಖಿಸುತ್ತಾರೆ. ಇದೊಂದು ಅದ್ಭುತ ಕಾರ್ಯ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.