ಬೆಂಗಳೂರು: ಗಣೇಶ ಚತುರ್ಥಿ ಹಬ್ಬಕ್ಕೆ ಇನ್ನು ಕೆಲವೇ ದಿನಗಳಿವೆ. ಗಣಪನನ್ನು ಸ್ವಾಗತಿಸಲು ಇಡೀ ಜನತೆ ಸಂಭ್ರಮದಿಂದ ಕಾಯುತ್ತಿದೆ. ಇದೇ ವೇಳೆ ಗಣಪನನ್ನು ನೈಸರ್ಗಿಕ ರೀತಿಯಲ್ಲಿ ಪೂಜಿಸಿ ಎಂಬ ಮನವಿಗಳನ್ನೂ ಜನರಲ್ಲಿ ಮಾಡಲಾಗುತ್ತಿದೆ.
ಬಿಜೆಪಿ ಸಂಸದ ಹಾಗೂ ಕೇಂದ್ರ ರಸಗೊಬ್ಬರ ಸಚಿವರಾಗಿರುವ ಅನಂತ್ ಕುಮಾರ್ ಅವರೂ ನೈಸರ್ಗಿಕ ಗಣಪನನ್ನು ಪ್ರಚಾರಪಡಿಸುವ ಅಭಿಯಾನಕ್ಕೆ ಕೈಜೋಡಿಸಿದ್ದಾರೆ.
ಈ ಗಣೇಶ ಚತುರ್ಥಿಗೆ ಪರಿಸರ ಸ್ನೇಹಿ ಗಣಪನನ್ನೇ ಪೂಜಿಸಿ ಎಂದು ಜನತೆಗೆ ಟ್ವಿಟರ್ ಮೂಲಕ ಅವರು ಕರೆ ನೀಡಿದ್ದಾರೆ. ಮಾತ್ರವಲ್ಲ ಪ್ರಾಕೃತಿಕ ಅಂಶಗಳನ್ನು ಪ್ರತಿನಿಧಿಸುವ ಗಣಪ ಪ್ರಕೃತಿ ದೇವತೆ ಎಂಬ ಎನ್ಜಿಓವೊಂದರ ಇಮೇಜ್ ಮತ್ತು ಲೇಖನವೊಂದನ್ನು ಅವರು ಶೇರ್ ಮಾಡಿಕೊಂಡಿದ್ದಾರೆ.
ಕೃತಕ ಬಣ್ಣ, ಅಪಾಯಕಾರಿ ಕೆಮಿಕಲ್ಗಳಿಂದ ನಿರ್ಮಿಸಿದ ಗಣಪನ ಮೂರ್ತಿಯನ್ನು ಪೂಜಿಸಿದರೆ ಗಣಪತಿ ಒಲಿಯುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.