ಲಕ್ನೋ: ರಸ್ತೆಗಳಲ್ಲಿ ಈದ್ ಹಬ್ಬದ ವೇಳೆ ನಮಾಝ್ ಮಾಡುವುದನ್ನು ನಿಲ್ಲಿಸಲು ನನಗೆ ಸಾಧ್ಯವಿಲ್ಲವೆಂದಾದರೆ, ಪೊಲೀಸ್ ಠಾಣೆಗಳಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಿಸುವುದನ್ನು ನಿಲ್ಲಿಸುವ ಯಾವುದೇ ಹಕ್ಕು ನನಗೆ ಇಲ್ಲ ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಹೇಳಿದ್ದಾರೆ.
ನೇಪಾಳ, ಮಾರಿಷಿಯಶ್ಗಳಲ್ಲಿ ಭಾರತೀಯ ಸಮುದಾಯದವರು ನಾವು ಹಿಂದೂಗಳು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಆದರೆ ಭಾರತದಲ್ಲಿ ನಾನು ಒಬ್ಬ ಹಿಂದೂ ಎಂದು ಹೇಳಿಕೊಂಡವರಿಗೆ ಕೋಮುವಾದಿಯ ಪಟ್ಟ ಕಟ್ಟಲಾಗುತ್ತದೆ ಎಂದಿದ್ದಾರೆ.
ನಾವು ಯದುವಂಶಿಗಳು ಎಂದು ಹೇಳಿಕೊಂಡಿದ್ದ ಹಿಂದಿನ ಸರ್ಕಾರದಲ್ಲಿದ್ದವರು, ಪೊಲೀಸ್ ಸ್ಟೇಶನ್ಗಳಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆಯನ್ನು ನಿಷೇಧಿಸಿದ್ದರು. ಪಾರ್ಥನೆಗಳು, ಕೀರ್ತನೆಗಳು ಪೊಲೀಸ್ ವ್ಯವಸ್ಥೆಯಲ್ಲಿ ಸುಧಾರಣೆಯನ್ನು ತರುತ್ತದೆ ಎಂದರು.
ಸಾಂಸ್ಕೃತಿಕ ಏಕತೆಯನ್ನು ತರಲು ಪ್ರಯತ್ನಿಸುವವರಿಗೆ ಕೋಮುವಾದಿಯ ಪಟ್ಟ ಕಟ್ಟಲಾಗುತ್ತದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.