ಪುಣೆ: ತ್ಯಾಜ್ಯಗಳನ್ನು ವಿಭಿನ್ನ ರೀತಿಯಲ್ಲಿ ವಿಲೇವಾರಿ ಮಾಡುವ ಮಾರ್ಗವನ್ನು ಕಂಡು ಹಿಡಿದಿರುವ ಪುಣೆಯ ಪ್ರಾಚಿ ದೇಶಪಾಂಡೆಯವರಿಗೆ ಪ್ರಧಾನಿ ನರೇಂದ್ರ ಮೋದಿ ಹೃದಯತಟ್ಟುವಂತಹ ಪತ್ರ ಬರೆದು ಶ್ಲಾಘಿಸಿದ್ದಾರೆ.
ತಮ್ಮ ಸ್ವಂತ ಮನೆಯ ತ್ಯಾಜ್ಯಗಳನ್ನು ಕಸದತೊಟ್ಟಿಗೆ ಹಾಕುವ ಬದಲು ಪ್ರಾಚಿ ಅವರು ಅದೇ ತ್ಯಾಜ್ಯಗಳಿಂದ ಕಾಂಪೋಸ್ಟ್ ಗೊಬ್ಬರಗಳನ್ನು ತಯಾರಿಸುತ್ತಿದ್ದಾರೆ.
ತಮ್ಮ ಮಾತ್ರವಲ್ಲದೇ ತಮ್ಮ ನೆರೆಹೊರೆಯವರ, ಸ್ಥಳಿಯ ದೇಗುಲಗಳ ತ್ಯಾಜ್ಯಗಳನ್ನು ಸಂಗ್ರಹಿಸುವ ಅವರು ಪರಿಸರ ಸ್ನೇಹಿ ಮಾದರಿಯಲ್ಲಿ ವಿಲೇವಾರಿ ಮಾಡಿ ಅವುಗಳಿಂದ ಗಿಡಗಳಿಗೆ ಹಾಕುವಂತಹ ಸಾವಯವ ಗೊಬ್ಬರಗಳನ್ನು ಉತ್ಪಾದನೆ ಮಾಡುತ್ತಿದ್ದಾರೆ.
ತಮ್ಮ ಮನೆಯ ರೂಫ್ನಲ್ಲಿ ಅವರು ಸಾವಯವ ಕೃಷಿಯನ್ನು ಆರಂಭಿಸಿದ್ದು, ಅವುಗಳಿಗೆ ಈ ಗೊಬ್ಬರವನ್ನು ಹಾಕುತ್ತಿದ್ದಾರೆ.
ತಮ್ಮ ಈ ಕಾರ್ಯದ ಬಗ್ಗೆ ಅವರು ಮೋದಿಯವರಿಗೆ ಪತ್ರ ಮುಖೇನ ತಿಳಿಸಿದ್ದರು. ಆದರೆ ಪ್ರತಿಯಾಗಿ ಅವರಿಂದ ಪತ್ರ ಬರಬಹುದು ಎಂಬ ನಿರೀಕ್ಷೆ ಪ್ರಾಚಿಗಿರಲಿಲ್ಲ. ಆದರೆ ಅನಿರೀಕ್ಷಿತ ಎಂಬಂತೆ ಮೋದಿ ಅವರಿಗೆ ಮನಮುಟ್ಟುವಂತಹ ಪತ್ರವೊಂದನ್ನು ಸ್ಪಂದನೆಯಾಗಿ ಕಳುಹಿಸಿದ್ದಾರೆ.
‘ಸಮಾಜ ಮತ್ತು ಪರಿಸರವನ್ನು ಸ್ವಚ್ಛವಾಗಿಡಲು ಮತ್ತು ಆರೋಗ್ಯವಾಗಿಡಲು ನೀವು ಮಾಡುತ್ತಿರುವ ಕಾರ್ಯ ಧನಾತ್ಮಕ ಪರಿವರ್ತನೆಯನ್ನು ತರಲಿದೆ’ ಎಂದು ಪತ್ರದಲ್ಲಿ ಮೋದಿ ಹೇಳಿದ್ದು, ಜನರ ಸಹಭಾಗಿತ್ವದಿಂದ ಮಾತ್ರ ಸ್ವಚ್ಛಭಾರತ ಯಶಸ್ವಿಯಾಗಲು ಸಾಧ್ಯ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.