ನವದೆಹಲಿ: ವೇದ, ಉಪನಿಷದ್, ರಾಮಾಯಣ, ಮಹಾಭಾರತ, ಭವದ್ಗೀತೆಗಳನ್ನು ಪ್ರತಿ ಮನೆಗಳಿಗೂ ತಲುಪುವಂತೆ ಮಾಡುವ ಉದ್ದೇಶದಿಂದ ಯೋಗ ಗುರು ರಾಮ್ದೇವ್ ಬಾಬಾ ಅವರು ಹೊಸ ಟಿವಿ ಚಾನೆಲ್ವೊಂದನ್ನು ಆರಂಭಿಸಿದ್ದಾರೆ.
ಚಾನೆಲ್ ಹೆಸರು ‘ವೇದಿಕ್’ ಆಗಿದ್ದು, ವೇದ ಮತ್ತು ಇತರ ಹಿಂದೂ ಗ್ರಂಥಗಳ ಅಧ್ಯಯನದ ಮೂಲಕ ಭಾರತೀಯ ಸಂಸ್ಕೃತಿಯ ಪ್ರಚಾರ ಕಾರ್ಯವನ್ನು ಇದು ಮಾಡಲಿದೆ. ‘ಆಸ್ಥಾ’ ಚಾನೆಲ್ ನಡೆಸುತ್ತಿರುವ ರಾಮ್ದೇವ್ ಬಾಬಾ, ಇದೀಗ ವೇದ ಮತ್ತು ಭಜನೆಗಳ ಪ್ರಚಾರಕ್ಕಾಗಿ ಮತ್ತೆರಡು ಚಾನೆಲ್ಗಳನ್ನು ಆರಂಭಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿದೆ.
ಟ್ವಿಟ್ ಮಾಡಿರುವ ಬಾಬಾ ರಾಮ್ದೇವ್, ‘ವೇದ, ಉಪನಿಷದ್, ರಾಮಾಯಣ, ದರ್ಶನ, ಮಹಾಭಾರತಗಳ ಪ್ರಚಾರಕ್ಕಾಗಿ ವೇದಿಕ್ ಚಾನೆಲ್ನ್ನು ಟಾಟಾ ಸ್ಕೈ 1078 ಮೂಲಕ ಆರಂಭಿಸಿದ್ದೇವೆ’ ಎಂದಿದ್ದಾರೆ.
ಆಸ್ಥಾ ಚಾನೆಲ್ನಲ್ಲಿ ನಾಲ್ಕು ಗಂಟೆಗಳ ಬಾಬಾ ಅವರ ಯೋಗ ಕಾರ್ಯಕ್ರಮ ಪ್ರಸಾರವಾಗುತ್ತದೆ. ಅವರ ಮಾರ್ಗದರ್ಶನದಲ್ಲೇ ಈ ವಾಹಿನಿ ಕಾರ್ಯನಿರ್ವಹಿಸುತ್ತದೆ. ಇದೀಗ ‘ವೇದಿಕ್’ ಕೂಡ ಅವರ ಮಾರ್ಗದರ್ಶನದಲ್ಲೇ ಕಾರ್ಯನಿರ್ವಹಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.