ನವದೆಹಲಿ: ಕ್ವಿಟ್ ಇಂಡಿಯಾ ಚಳುವಳಿಯಂತಹ ಐತಿಹಾಸಿಕ ಸನ್ನಿವೇಶಗಳ ಬಗ್ಗೆ ಯುವಜನಾಂಗ ತಿಳಿದುಕೊಳ್ಳುವುದು ಅತ್ಯಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕ್ವಿಟ್ ಇಂಡಿಯಾ ಚಳುವಳಿಯ 75ನೇ ದಿನಾಚರಣೆಯ ಹಿನ್ನಲೆಯಲ್ಲಿ ಲೋಕಸಭೆಯಲ್ಲಿ ಅವರು ಮಾತನಾಡಿದರು. 1942ರ ಆ.9ರಂದು ಕ್ವಿಟ್ ಇಂಡಿಯಾ ಚಳುವಳಿ ಆರಂಭಗೊಂಡಿತ್ತು.
ಕ್ವಿಟ್ ಇಂಡಿಯಾ ಚಳುವಳಿಯಿಂದ ಹೊಸ ನಾಯಕತ್ವ ಉದಯವಾಯಿತು. ಅವರೆಲ್ಲಾ ಚಳುವಳಿಯುದ್ದಕ್ಕೂ ಮಹಾತ್ಮ ಗಾಂಧೀಜಿಗೆ ಬೆಂಬಲ ನೀಡಿದರು ಎಂದರು.
ಗಾಂಧೀಜಿಯ ಜನಪ್ರಿಯ ‘ಮಾಡು ಇಲ್ಲವೇ ಮಡಿ’ ಘೋಷಣೆಯನ್ನು ಉಲ್ಲೇಖಿಸಿದ ಅವರು, ಮುಂದಿನ 5 ವರ್ಷದಲ್ಲಿ ಯುವ ಜನಾಂಗ ಮುಂದೆ ಬಂದು ಹೊಸ, ಕನಸಿನ ಭಾರತವನ್ನು ನಿರ್ಮಾಣ ಮಾಡಬೇಕು ಎಂದು ಕರೆಯಿತ್ತರು.
ಇದಕ್ಕೂ ಮೊದಲು ಅವರು 2022ರಲ್ಲಿ ಕನಸಿನ ಭಾರತದ ನಿರ್ಮಾಣದ ಗುರಿಯನ್ನು ಹೊಂದಿದ ’ಸಂಕಲ್ಪ ಸೇ ಸಿದ್ಧಿ’ಯನ್ನು ಅನಾವರಣಗೊಳಿಸಿದರು.
‘1942ರ ಭಾರತದ ಅವಶ್ಯಕತೆ ವಸಾಹತುಶಾಹಿಯಿಂದ ಮುಕ್ತಗೊಳ್ಳುವುದಾಗಿತ್ತು, ಆದರೆ 75 ವರ್ಷಗಳ ಬಳಿಕದ ದೇಶದ ವಿಷಯಗಳು ಬೇರೆಯದೆ ಆಗಿದೆ’ ಎಂದು ಮೋದಿ ಟ್ವಿಟ್ ಮಾಡಿದ್ದಾರೆ.
‘ಭಾರತವನ್ನು ಬಡತನ, ಕೊಳಚೆ, ಭಯೋತ್ಪಾದನೆ, ಜಾತಿಯತೆ, ಕೋಮುವಾದದಿಂದ ಮುಕ್ತಗೊಳಿಸುವ, 2022ರ ವೇಳೆ ಕನಸಿನ ಹೊಸ ಭಾರತ ನಿರ್ಮಾಣದ ಪಣತೊಡೋಣ’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.