ಹರಿದ್ವಾರ: ಭಾರತದ ವಿರುದ್ಧ ಪಿತೂರಿ ಮಾಡುತ್ತಿರುವ ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಯೋಗ ಗುರು ಬಾಬಾರಾಮ್ ದೇವ್ ಬಾಬಾ ಕರೆ ನೀಡಿದ್ದಾರೆ. ದೋಕ್ಲಾಂನಲ್ಲಿ ಭಾರತ-ಚೀನಾ ನಡುವೆ ಉದ್ಭವಿಸಿರುವ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಅವರು ಈ ಕರೆ ನೀಡಿದ್ದಾರೆ.
‘ಪಾಕಿಸ್ಥಾನದ ಭಯೋತ್ಪಾದಕರಿಗೆ ಚೀನಾ ಬಹಿರಂಗ ಬೆಂಬಲ ನೀಡುತ್ತಿದೆ. ನಾವು ಪಾಕ್ಗೆ ತಕ್ಕ ಪ್ರತ್ಯುತ್ತರ ನೀಡಬೇಕು, ಇದಕ್ಕೆ ಮೊದಲು ನಾವು ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತದೊಂದಿಗೆ ವಿಲೀನಗೊಳಿಸಬೇಕು, ಎರಡನೇಯದಾಗಿ ಚೀನಾದ ವಸ್ತುಗಳನ್ನು ಅದು ಮೊಬೈಲ್, ವಾಚ್ , ಕಾರು, ಟಾಯ್ ಯಾವುದೇ ಆಗಿರಲಿ ಅದನ್ನು ಬಹಿಷ್ಕರಿಸಬೇಕು’ ಎಂದರು.
ಈ ವಿಷಯದ ಬಗ್ಗೆ ಎಲ್ಲಾ ಪಕ್ಷಗಳು ರಾಜಕೀಯವನ್ನು ದೂರವಿಟ್ಟು ಒಂದಾಗಬೇಖು. ಭಾರತ-ಚೀನಾ ನಡುವೆ ಬಿಕ್ಕಟ್ಟು ಉಲ್ಬಣಗೊಳ್ಳುತ್ತಿರುವಂತೆ ವ್ಯಾಪಾರಿ ಚೀನಾ ವಸ್ತುಗಳನ್ನು ದೂರವಿಡುತ್ತಿದ್ದಾರೆ. ಅಲ್ಲದೇ ಜನರಿಗೂ ಅವುಗಳನ್ನು ಖರೀದಿಸದಂತೆ ಮನವಿ ಮಾಡುತ್ತಿದ್ದಾರೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.