ನವದೆಹಲಿ: ಸುದೀರ್ಘ ವಿಚ್ಛೇಧನಾ ಪ್ರಕ್ರಿಯೆಯಿಂದ ತೊಂದರೆಗೊಳಗಾಗುವ ಮಹಿಳೆಯರ ಸಂಕಷ್ಟಕ್ಕೆ ನರೇಂದ್ರ ಮೋದಿ ಸರ್ಕಾರ ಧಾವಿಸಿದೆ. ವಿಚ್ಛೇಧನಾ ಪ್ರಕ್ರಿಯೆ ನಡೆಯುತ್ತಿರುವ ವೇಳೆಯೇ ಮಹಿಳೆಯ ಸರ್ಕಾರಿ ಉದ್ಯೋಗಿ ಪೋಷಕರು ತೀರಿಕೊಂಡರೆ ಅವರ ಪಿಂಚಣಿಯನ್ನು ಪಡೆಯುವ ಅರ್ಹತೆ ಮಹಿಳೆಗೆ ದೊರೆಯಲಿದೆ.
ವಿಚ್ಛೇದನಾ ದೊರೆತ ದಿನದಿಂದ ಪಿಂಚಣಿ ಸೌಲಭ್ಯ ಆರಂಭವಾಗಲಿದೆ.
2004ರ ಕಾನೂನಿನ ಪ್ರಕಾರ ಸರ್ಕಾರಿ ಉದ್ಯೋಗಿ ಮರಣದ ನಂತರ ಅವರ ಪತ್ನಿ ಅಥವಾ ಪತಿ ಪಿಂಚಣಿ ಪಡೆಯಬಹುದು. ಅಲ್ಲದೇ 25 ವರ್ಷದೊಳಗಿನ ಅವಲಂಬಿತ ಮಗ ಅಥವಾ ಮಗಳು ಪಿಂಚಣಿ ಪಡೆದುಕೊಳ್ಳಬಹುದು. ವಿಚ್ಛೇದಿತ ಅಥವಾ ವಿಧವಾ ಮಗಳಿಗೆ 25 ವರ್ಷದ ಬಳಿಕವೂ ಪೋಷಕರ ಪಿಂಚಣಿಯನ್ನು ಪಡೆದುಕೊಳ್ಳಬಹುದಾದ ಅವಕಾಶವಿದೆ.
ಒಂದು ವೇಳೆ 25 ವರ್ಷದೊಳಗಿನ ಮಕ್ಕಳು ಇಲ್ಲವಾದರೆ ಪಿಂಚಣಿ ಅಲ್ಲಿಗೆ ನಿಂತು ಹೋಗುತ್ತದೆ.
ಇದೀಗ ಮಗಳ ವಿಚ್ಛೇದನಾ ಇತ್ಯರ್ಥ ಆಗದೆ ಅಥವಾ ಪ್ರಕ್ರಿಯೆ ನಡೆಯುತ್ತಿರುವ ವೇಳೆ ಸರ್ಕಾರಿ ಉದ್ಯೋಗಿ ತಂದೆ-ತಾಯಿಯ ಮರಣ ಸಂಭವಿಸಿದರೆ ವಿಚ್ಛೇದನಾ ಪಡೆದ ತರುವಾಯ ಆ ಮಗಳು ಪಿಂಚಣಿ ಪಡೆಯಲು ಅರ್ಹಳಾಗಿರುತ್ತಾಳೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.