ನವದೆಹಲಿ: ಭಾರತದ ಮಾಜಿ ಕ್ರಿಕೆಟ್ ಆಟಗಾರ ವಿರೇಂದ್ರ ಸೆಹ್ವಾಗ್ ಮತ್ತು ಖ್ಯಾತ ಅಥ್ಲೇಟ್ ಪಿಟಿ ಉಷಾ ಅವರು 12 ಸದಸ್ಯರನ್ನೊಳಗೊಂಡ ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿ ಸಮಿತಿಗೆ ನೇಮಕಗೊಂಡಿದ್ದಾರೆ.
ಪ್ರಶಸ್ತಿಗಳಿಗೆ ಆಟಗಾರರನ್ನು ಆಯ್ಕೆ ಮಾಡುವ ಮಹತ್ತರವಾದ ಜವಾಬ್ದಾರಿಯನ್ನು ಈ ಸಮಿತಿ ಹೊಂದಿದೆ. ನಿವೃತ್ತ ನ್ಯಾ. ಸಿ.ಕೆ.ಟಕ್ಕರ್ ಅವರು ಈ ಸಮಿತಿಯ ನೇತೃತ್ವ ವಹಿಸಿಕೊಳ್ಳಲಿದ್ದಾರೆ.
ಆಗಸ್ಟ್ 3ರಂದು ಈ ಸಮಿತಿ ಸಭೆ ಸೇರಲಿದ್ದು, ಈ ವರ್ಷದ ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿಗೆ ಆಟಗಾರರನ್ನು ಆಯ್ಕೆ ಮಾಡಲಿದೆ.
ಈ ಸಮಿತಿಯಲ್ಲಿ ಬಾಕ್ಸಿಂಗ್ ಪಟು ಮುಕುಂದ್ ಕಿಲ್ಲೆಕಾರ್, ಕಬಡ್ಡಿ ಆಟಗಾರ ಸುನೀಲ್ ದಬ್ಬಾಸ್, ಪತ್ರಕರ್ತರಾದ ಎಂ.ಆರ್ ಮಿಶ್ರಾ, ಎಸ್.ಕಣ್ಣನ್, ಸಂಜೀವ್ ಕುಮಾರ್, ಪ್ಯಾರಾ ಅಥ್ಲೇಟ್ ಲತಾ ಮಾಧವಿ, ಕ್ರೀಡಾ ಆಡಳಿತಗಾರರಾದ ಅನಿಲ್ ಖನ್ನಾ, ಇಂಜೆತಿ ಶ್ರೀವಾಸ್ತವ, ರಾಜೀವ್ ಸಿಂಗ್ ಇರಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.