ನವದೆಹಲಿ: ಪ್ರಣವ್ ಮುಖರ್ಜಿಯವರು ರಾಷ್ಟ್ರಪತಿಯಾಗಿದ್ದ ಅವಧಿಯಲ್ಲಿ ರಾಷ್ಟ್ರಪತಿ ಭವನವು ‘ಲೋಕ ಭವನ’ವಾಗಿ ಬದಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮುಖರ್ಜಿಯವರ ವಿದಾಯ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ‘ಮುಖರ್ಜಿಯವರು ದೇಶಕ್ಕೆ ಮತ್ತು ನಾಗರಿಕರಿಗೆ ತೀರಾ ಹತ್ತಿರವಾಗಿದ್ದರಿಂದ ಅವರ ಅವಧಿಯಲ್ಲಿ ರಾಷ್ಟ್ರಪತಿ ಭವನವು ಲೋಕ ಭವನವಾಗಿ ಪರಿವರ್ತನೆಯಾಗಿದೆ’ ಎಂದರು.
ಮುಖರ್ಜಿಯವರು ನೀಡಿದ ಸಲಹೆಗಳಿಗೆ ಧನ್ಯವಾದ ಸಲ್ಲಿಸಿದ ಮೋದಿ, ಅವರಿಂದಾಗಿಯೇ ಹಲವಾರು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲು ನನ್ನಿಂದ ಸಾಧ್ಯವಾಯಿತು ಎಂದಿದ್ದಾರೆ.
‘ಎಲ್ಲವನ್ನೂ ಶಾಂತವಾಗಿ ಅವರು ಆಲಿಸುತ್ತಿದ್ದರು. ಬದಲಾವಣೆ ಅಗತ್ಯವಿದ್ದರೆ ಅದನ್ನು ಹೇಳುತ್ತಿದ್ದರು. ಸದಾ ನಮಗೆ ಪ್ರೇರಣೆ ನೀಡುತ್ತಿದ್ದರು. ಅವರಿಂದ ಹಲವಾರು ನಿರ್ಧಾರಗಳನ್ನು ತೆಗೆದುಕೊಳ್ಳಲು ನನಗೆ ಸಾಧ್ಯವಾಯಿತು. ಅವರಿಂದ ಪಡೆದ ಮಾರ್ಗದರ್ಶನದಿಂದ ನನಗೆ ಬಹಳಷ್ಟು ಸಹಾಯಕವಾಯಿತು. ಅವರೊಂದಿಗೆ ಕಾರ್ಯ ಮಾಡಿದ ಎಲ್ಲರಿಗೂ ಈ ಅನುಭವ ಆಗಿದೆ ಎಂದು ಭಾವಿಸಿದ್ದೇನೆ’ ಎಂದಿದ್ದಾರೆ.
ಮುಖರ್ಜಿ ಜ್ಞಾನವಂತ ಮತ್ತು ತೀರಾ ಸರಳ ಮನುಷ್ಯ ಎಂದು ಮೋದಿ ಬಣ್ಣಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.