ನವದೆಹಲಿ: ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿ ಭಾನುವಾರ ಸಂಸದರನ್ನು ಉದ್ದೇಶಿಸಿ ಭಾವುಕರವಾಗಿ ವಿದಾಯ ಭಾಷಣ ಮಾಡಿದ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು, ‘ನಾನು ಈ ಸಂಸತ್ತಿನಿಂದ ರೂಪಿತಗೊಂಡವನು’ ಎಂದಿದ್ದಾರೆ.
81 ವರ್ಷದ ಪ್ರಣವ್ ಸಂಸತ್ತಿಗೆ ಆಗಮಿಸುತ್ತಿದ್ದಂತೆ ಅವರನ್ನು ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ, ಪ್ರಧಾನಿ ನರೇಂದ್ರ ಮೋದಿ, ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್, ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್ ಬರಮಾಡಿಕೊಂಡರು.
20 ನಿಮಿಷಗಳ ಕಾಲ ಹೃದಯಸ್ಪರ್ಶಿ ಭಾಷಣ ಮಾಡಿದ ಅವರು, ನೆನಪುಗಳ ಕಾಮನಬಿಲ್ಲಿನೊಂದಿಗೆ, ಸಂತೃಪ್ತಿಯ ಭಾವದೊಂದಿಗೆ ವಿದಾಯ ಹೇಳುತ್ತಿದ್ದೇನೆ ಎಂದರು. ಪಶ್ಚಿಮಬಂಗಾಳದ ಶಾಸಕನಾಗಿನಿಂದ ದೇಶದ ಅತ್ಯುನ್ನತ ಸ್ಥಾನ ಪಡೆಯುವವರೆಗಿನ ತಮ್ಮ ಪಯಣವನ್ನು ನೆನಪಿಸಿಕೊಂಡರು.
”37 ವರ್ಷಗಳನ್ನು ಸಂಸತ್ತಿಗಾಗಿ ಸವೆಸಿದ್ದೇನೆ. ಕೇವಲ 37 ವರ್ಷದವನಿದ್ದಾಗ ದೇಶಕ್ಕಾಗಿ ಸೇವೆ ಸಲ್ಲಿಸುವ ಅವಕಾಶ ಲಭಿಸಿತು. ರಾಷ್ಟ್ರಪತಿಯಾಗಿ ಸಂವಿಧಾನವನ್ನು ಸಂರಕ್ಷಿಸುವ, ಕಾಪಾಡುವ, ಸಮರ್ಥಿಸುವ ಪ್ರಯತ್ನವನ್ನು ವೇವಲ ಪತ್ರಗಳಲ್ಲಿ ಮಾತ್ರವಲ್ಲದೇ, ಕಾರ್ಯದಲ್ಲೂ ಮಾಡಿ ತೋರಿಸಿದ್ದೇನೆ ಎಂದರು.
ಸಂಸತ್ತಿನಲ್ಲಿ ಕುಸಿಯುತ್ತಿರುವ ಕಲಾಪದ ಸಮಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಪತ್ರಿಪಕ್ಷ ಮತ್ತು ಸರ್ಕಾರಗಳಿಗೆ ಸಲಹೆಗಳನ್ನು ನೀಡಿದರು. ಸಂಸತ್ತು ಸಂವಾದ, ಚರ್ಚೆಗಾಗಿ ಇದೆ ಎಂದರು. ಜಿಎಸ್ಟಿಯಂತಹ ಮಸೂದೆ ಜಾರಿ ನಮ್ಮ ಸಂಸತ್ತಿನ ಪ್ರಬುದ್ಧತೆಯನ್ನು ತೋರಿಸುತ್ತದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.