News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪಶ್ಚಿಮ ಬಂಗಾಳದ ಜಂಗಿಪುರದಲ್ಲಿ ಉಜ್ವಲ ಯೋಜನೆಯಡಿ ಎಲ್‌ಪಿಜಿ ವಿತರಿಸಿದ ರಾಷ್ಟ್ರಪತಿ

ಕೊಲ್ಕತ್ತಾ : ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ತಮ್ಮ ಮಾಜಿ ಲೋಕಸಭಾ ಕ್ಷೇತ್ರ ಪಶ್ಚಿಮ ಬಂಗಾಳದ ಜಂಗಿಪುರದಲ್ಲಿ ಶನಿವಾರ ಉಜ್ವಲ ಯೋಜನೆಯಡಿ ಎಲ್‌ಪಿಜಿ ಸಂಪರ್ಕ ವಿತರಣೆ ಮಾಡಿದರು. ಇದು 2 ಕೋಟಿ 50 ಲಕ್ಷನೆಯ ಎಲ್‌ಪಿಜಿ ಸಂಪರ್ಕವಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಎನ್‌ಡಿಎ ಸರ್ಕಾರ ಉಜ್ವಲ ಯೋಜನೆಯನ್ನು ಬಡವರಿಗೆ ಸ್ವಚ್ಛ ಇಂಧನ ಮತ್ತು ಉತ್ತಮ ಜೀವನ ಕಲ್ಪಿಸುವ ಉದ್ದೇಶದೊಂದಿಗೆ ಜಾರಿಗೆ ತಂದಿತ್ತು.

6 ಕೋಟಿಯಷ್ಟು ಜನರಿಗೆ ಈ ಯೋಜನೆಯಡಿ ಉಚಿತ ಎಲ್‌ಪಿಜಿ ಸಂಪರ್ಕವನ್ನು ಕಲ್ಪಿಸಿ ಕೊಡುವ ಗುರಿಯನ್ನು ಹೊಂದಿದ್ದು, ಈಗಾಗಲೆ ಅರ್ಧದಷ್ಟು ಗುರಿಯನ್ನು ತಲುಪಲಾಗಿದೆ.

ಜಂಗಿಪುರದಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಇಂಧನ ಸಚಿವ ಧರ್ಮೇಂದ್ರ ಪ್ರಧಾನ್, ಅಲ್ಲಿನ ಕಾಂಗ್ರೆಸ್ ಸಂಸದ ಅಭಿಜಿತ್ ಮುಖರ್ಜಿ ಉಪಸ್ಥಿತರಿದ್ದರು.

ಈಗಾಗಲೇ ಉಜ್ವಲ ಯೋಜನೆಯಡಿ 2.5 ಕೋಟಿಯಷ್ಟು ಎಲ್‌ಪಿಜಿಯನ್ನು ಬಡತನ ರೇಖೆಗಿಂತ ಕೆಳಗಿರುವವರಿಗೆ ಉಚಿತವಾಗಿ ವಿತರಿಸಲಾಗಿದ್ದು, 2 ಕೋಟಿ 50 ನೆಯ ಎಲ್‌ಪಿಜಿಯನ್ನು ಜಂಗಿಪುರದ ನಿವಾಸಿಗೆ ನೀಡಲಾಗಿದೆ.

ಜಂಗಿಪುರದಿಂದ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು 2 ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top