ಬೆಂಗಳೂರು: ಸಿನಿಮಾ ನಟರ ಬಗ್ಗೆ ಹುಚ್ಚು ಅಭಿಮಾನ ಇರಿಸಿಕೊಂಡಿರುವ ಅಭಿಮಾನಿಗಳು ತನ್ನ ನೆಚ್ಚಿನ ನಟನ ಸಿನಿಮಾ ಬಿಡುಗಡೆ ಸಂದರ್ಭ, ಹುಟ್ಟು ಹಬ್ಬದ ಸಂದರ್ಭ ಸಂಭ್ರಮಾಚರಿಸಿ ಅತಿರೇಕದ ವರ್ತನೆಗಳನ್ನು ತೋರಿಸುತ್ತಾರೆ. ಈ ರೀತಿ ಮಾಡದಂತೆ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡುವ ಬದಲು ಹೆಚ್ಚಿನ ನಟರು ತಮ್ಮ ವೈಭವೀಕರಣವನ್ನು ಎಂಜಾಯ್ ಮಾಡುತ್ತಾರೆ.
ಆದರೆ ಕಿಚ್ಚ ಎಂದು ಫೇಮಸ್ ಆಗಿರುವ ನಟ ಸುದೀಪ್ ಇನ್ನು ಮುಂದೆ ತಾನು ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದಿದ್ದಾರೆ. ಅಲ್ಲದೇ ತಮ್ಮ ಅಭಿಮಾನಿಗಳಿಗೂ ತನ್ನ ಹುಟ್ಟು ಹಬ್ಬ ಆಚರಿಸದಂತೆ ಕರೆ ನೀಡಿದ್ದಾರೆ. ಕಷ್ಟಪಟ್ಟು ದುಡಿದ ಹಣದಲ್ಲಿ ನನಗೆ ಕೇಕ್, ಅಲಂಕಾರಿಕ ವಸ್ತು ತರುವ ಬದಲು ಅದೇ ಹಣವನ್ನು ಅಗತ್ಯ ಇರುವ ಬಡವರಿಗಾಗಿ ಬಳಸಿ ಅವರ ಮನೆ ಬೆಳಗಿಸಿ, ಅದುವೇ ನೀವು ನನಗೆ ನೀಡುವ ಅತ್ಯುತ್ತಮ ಉಡುಗೊರೆ ಎಂದಿದ್ದಾರೆ.
ಅದೇನೆಯಿರಲಿ ಸುದೀಪ್ ಅಭಿಮಾನಿಗಳಲ್ಲಿ ಅತ್ಯುತ್ತಮ ಮನವಿಯನ್ನು ಮಾಡಿಕೊಳ್ಳುವ ಮೂಲಕ ಇತರ ಎಲ್ಲಾ ನಟರಿಗೂ ಮಾದರಿ ಎನಿಸಿದ್ದಾರೆ. ಅವರ ಹಾದಿಯಲ್ಲೇ ಇತರ ನಟರು ಪ್ರಯಾಣಿಸಿದರೆ ಒಳಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.