ನವದೆಹಲಿ : ದೇಶಕ್ಕಾಗಿ ಅವಿರತ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಯುವಜನತೆಗಾಗಿ ಪುಸ್ತಕವೊಂದನ್ನು ಬರೆಯಲು ನಿರ್ಧರಿಸಿದ್ದಾರೆ. ಇದರಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಪರೀಕ್ಷಾ ಒತ್ತಡ, ಪರೀಕ್ಷೆಯ ನಂತರ ಮುಂದೇನು ಎಂಬಂತಹ ಸಮಸ್ಯೆಗಳನ್ನು ಪರಿಹರಿಸುವ ಮಾರ್ಗ ಈ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಪುಸ್ತಕವೊಂದನ್ನು ಬರೆಯಲಿದ್ದಾರೆ.
ಪೆಂಗ್ವಿನ್ ರ್ಯಾಂಡಮ್ ಹೌಸ್ ಪ್ರಕಾಶನ ಸಂಸ್ಥೆಯ ವತಿಯಿಂದ ಈ ಪುಸ್ತಕವು ಬಹು ಭಾಷೆಗಳಲ್ಲಿ ವರ್ಷಾಂತ್ಯದ ವೇಳೆಗೆ ಪ್ರಕಟಗೊಳ್ಳಲಿದೆ ಎಂದು ಸಂಸ್ಥೆ ಹೇಳಿದೆ.
ವಿದ್ಯಾರ್ಥಿಗಳು ಪರೀಕ್ಷಾ ಒತ್ತಡದಿಂದ ಹೊರಬರುವುದು ಹೇಗೆ ? ಮನಸ್ಸಿನ ಪ್ರಶಾಂತತೆಯನ್ನು ಕಾಯ್ದುಕೊಳ್ಳುವುದು ಹೇಗೆ ? ಪರೀಕ್ಷೆಗಳು ಮುಗಿದ ಬಳಿಕ ಏನು ಮಾಡಬಹುದು? ವಿಶೇಷವಾಗಿ ಬದುಕಿನಲ್ಲಿ ನಿರ್ಣಾಯಕ ಘಟ್ಟವಾದ 10 ಮತ್ತು 12 ನೇ ತರಗತಿ ವಿದ್ಯಾರ್ಥಿಗಳಿಗೆ ಬೇಕಾದ ಜ್ಞಾನಕ್ಕೆ ಕುರಿತಂತೆ ವಿಷಯಗಳನ್ನು ಒಳಗೊಂಡಿದ್ದು ಅನೌಪಚಾರಿಕ ರೀತಿಯಲ್ಲಿರುತ್ತದೆ. ಜೀವನದಲ್ಲಿ ಅಂಕಗಳಿಗಿಂತ ಜ್ಞಾನ ಮೇಲು ಎಂಬ ಅರಿವನ್ನು ಮೂಡಿಸುವಂತಹ ರೀತಿಯಲ್ಲಿ ಪುಸ್ತಕವು ಇರಲಿದೆ.
ಪುಸ್ತಕಗಳ ಮೂಲಕ ಪ್ರಧಾನಿಯವರು ವಿದ್ಯಾರ್ಥಿಗಳ ಸ್ನೇಹಿತನಾಗಿದ್ದು, ಪರೀಕ್ಷೆ ಸಮಯದಲ್ಲಿ ಸಿದ್ಧತೆ ನಡೆಸುವಲ್ಲಿ ಅವರ ಮನೋಸ್ಥೈರ್ಯ ಹೆಚ್ಚಿಸುವಲ್ಲಿ ನೆರವಾಗಲು ಬಯಸಿದ್ದಾರೆ ಎಂದು ಪ್ರಕಾಶಕರು ಹೇಳಿದ್ದಾರೆ.
ಮನ್ ಕಿ ಬಾತ್ ಕಾರ್ಯಕ್ರಮಕ್ಕೆ ಲಭಿಸಿದ ಸ್ಪಂದನೆ ಪುಸ್ತಕ ಬರೆಯಲು ಪ್ರಧಾನಿಯವರಿಗೆ ಪ್ರೇರಣೆಯಾಗಿದ್ದು, ಪುಸ್ತಕ ಬರೆಯುವ ಕಲ್ಪನೆಯನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಪ್ರಸ್ತಾಪಿಸಿದ್ದಾರೆ. ನನಗೆ ಇಷ್ಟವಾದ, ಮನಸ್ಸಿಗೆ ಹತ್ತಿರವಾದ ವಿಷಯಗಳ ಕುರಿತು ಬರೆಯಬೇಕೆಂದಿದ್ದೇನೆ. ಯುವಜನತೆಯ ಭವಿಷ್ಯ ಮತ್ತು ಯುವ ನಾಯಕತ್ವದ ನಿಟ್ಟಿನಲ್ಲಿ ನನ್ನ ಪರಿಕಲ್ಪನೆ ನಾಳೆಗಳ ಬಗ್ಗೆ ದೂರದೃಷ್ಟಿಯನ್ನೊಳಗೊಂಡ ವಿಷಯಗಳನ್ನು ಬರೆಯಲಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ ಎಂದು ಪ್ರಕಾಶಕರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.