ಭೋಪಾಲ್: ಮಧ್ಯಪ್ರದೇಶ ಸರ್ಕಾರ ತನ್ನ ನದಿ ಸಂರಕ್ಷಣೆಯ ಭಾಗವಾಗಿ ಬರೋಬ್ಬರಿ 6 ಕೋಟಿ ಗಿಡಗಳನ್ನು ನರ್ಮದಾ ನದಿ ದಂಡಗಳಲ್ಲಿ ಕೇವಲ ನೆಡುತ್ತಿದೆ. 12 ಗಂಟೆಯಲ್ಲಿ ಇವುಗಳನ್ನು ನೆಟ್ಟು ಪೂರೈಸುವ ಗುರಿ ಹೊಂದಲಾಗಿದೆ. ಇದು ಗಿನ್ನಿಸ್ ದಾಖಲೆಯ ಪುಟ ಸೇರುವ ಸಾಧ್ಯತೆ ಇದೆ.
ಉತ್ತರಪ್ರದೇಶ 24 ಗಂಟೆಗಳಲ್ಲಿ 5 ಕೋಟಿ ಗಿಡಗಳನ್ನು ನೆಟ್ಟಿರುವುದು ಇದುವರೆಗಿನ ದಾಖಲೆ. ಈ ದಾಖಲೆಯನ್ನು ಮಧ್ಯಪ್ರದೇಶ ಮುರಿಯಲಿದೆ.
ಬೆಳಿಗ್ಗೆ 7 ಗಂಟೆಯಿಂದ ಗಿಡ ನೆಡುವ ಕಾರ್ಯ ಆರಂಭವಾಗಿದ್ದು, ರಾತ್ರಿ 7 ಗಂಟೆಯವರೆಗೂ ಮುಂದುವರೆದಿದೆ. 24 ಜಿಲ್ಲೆಗಳಲ್ಲಿ ಈ ಅಭಿಯಾನ ನಡೆದಿದೆ.
ನರ್ಮದೆ ಉಗಮಗೊಳ್ಳುವ ಅಮರಕಾಂತಕ್ನಲ್ಲಿ ಮುಖ್ಯಮಂತ್ರಿ ಶಿವರಾಜ್ ಚೌವ್ಹಾಣ್ ಅವರು ಪೂಜೆ ಮಾಡಿ, ಗಿಡ ನೆಟ್ಟು ಅಭಿಯಾನಕ್ಕೆ ಚಾಲನೆ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.