ಪಾಟ್ನಾ: ಬಿಹಾರದ ಮಹಾಮೈತ್ರಿಯಲಿನ್ಲ ಒಡಕುಗಳು ಮತ್ತೆ ಗೋಚರಿಸುತ್ತಿದೆ. ಜೆಡಿಯು ಮುಖಂಡರೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿ ನಿತೀಶ್ ಕುಮಾರ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಕಾಂಗ್ರೆಸ್ ಮಹಾತ್ಮ ಗಾಂಧೀಜಿಯವರ ಸಿದ್ಧಾಂತಗಳನ್ನು ಮೂಲೆಗುಂಪು ಮಾಡಿದೆ ಎಂದು ಹರಿಹಾಯ್ದಿರುವ ಅವರು, ಆ ಹಳೆಯ ಪಕ್ಷದಿಂದ ಕಲಿಯುವಂತಹುದ್ದು ನನಗೇನು ಇಲ್ಲ ಎಂದಿದ್ದಾರೆ.
‘ನಾವು ಯಾರನ್ನೂ ಅನುಸರಿಸುವುದಿಲ್ಲ, ನಮಗೆ ನಮ್ಮ ಸಿದ್ಧಾಂತದ ಸ್ಪಷ್ಟ ಜ್ಞಾನವಿದೆ’ ಎಂದರು.
ಬಿಹಾರದಲ್ಲಿ ಜೆಡಿಯು, ಆರ್ಜೆಡಿ ಮತ್ತು ಕಾಂಗ್ರೆಸ್ ಮಹಾಮೈತ್ರಿ ಮಾಡಿಕೊಂಡು ಆಡಳಿತದಲ್ಲಿವೆ. ಈ ಮೈತ್ರಿಯಲ್ಲಿ ಒಡಕುಗಳು ಮೂಡಿದ್ದು, ರಾಷ್ಟ್ರಪತಿ ಅಭ್ಯರ್ಥಿಯನ್ನು ಬೆಂಬಲಿಸುವ ವಿಷಯದಲ್ಲೂ ಇದು ಬಹಿರಂಗವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.