ಲಕ್ನೋ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಶುಕ್ರವಾರ ಇ-ನಿವಾರಣ್ ಅಪ್ಲಿಕೇಶನನ್ನು ಆರಂಭಿಸಿದ್ದಾರೆ. ಈ ಆ್ಯಪ್ ಗ್ರಾಹಕರಿಗೆ ತಮ್ಮ ವಿದ್ಯುತ್ ಬಿಲ್ನ್ನು ತಾವೇ ರಚಿಸಲು ಮತ್ತು ಆನ್ಲೈನ್ ಮೂಲಕ ಪಾವತಿಸಲು ಸಹಾಯಕವಾಗಲಿದೆ.
ಗ್ರಾಹಕರು ಈ ಆ್ಯಪ್ನಲ್ಲಿನ ‘ಗ್ರಾಹಕ್ ಸೇವಾ’ ಆಯ್ಕೆಯನ್ನು ಕ್ಲಿಕ್ ಮಾಡಿ ದೂರುಗಳನ್ನೂ ದಾಖಲಿಸಬಹುದು.
‘ಇನ್ನು ಮುಂದೆ ಯಾರೂ ತರ್ಕಹೀನ ಬಿಲ್ ಅಮೌಂಟ್ನ್ನು ನಿಮ್ಮ ಮೇಲೆ ಹೇರಲು ಸಾಧ್ಯವಿಲ್ಲ. ಈ ಆ್ಯಪ್ ಮೂಲಕ ನಿಮ್ಮ ಬಿಲ್ನ್ನು ನೀವೇ ತಯಾರಿಸಬಹುದು’ ಎಂದು ಯೋಗಿ ಹೇಳಿದ್ದಾರೆ.
ಗೂಗಲ್ ಪ್ಲೇಸ್ಟೋರ್ ಮೂಲಕ ಈ ಆ್ಯಪ್ನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಈಗಾಗಲೇ ಆನ್ಲೈನ್ ಮೂಲಕ ಪಾವತಿಸುತ್ತಿರುವವರು ಅದೇ ಪಾಸ್ವರ್ಡ್ ಬಳಸಿ ಆ್ಯಪ್ಗೆ ಲಾಗಿನ್ ಆಗಬಹುದು. ಹೊಸ ಗ್ರಾಹಕರು ಹೊಸ ಪಾಸ್ವರ್ಡ್ ಸೃಷ್ಟಿಸಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.