ನವದೆಹಲಿ: ಕಳೆದ ವಾರವಷ್ಟೇ 17 ಪ್ರತಿಪಕ್ಷಗಳು ಒಟ್ಟಾಗಿ ಸೇರಿ ಮೀರಾ ಕುಮಾರ್ ಅವರನ್ನು ಒಮ್ಮತದಿಂದ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಮಾಡಿದ್ದವು. ಆದರೆ ಸರಿಯಾಗಿ ಒಂದು ವಾರಗಳ ಬಳಿಕ ಪ್ರತಿಪಕ್ಷಗಳ ಒಗ್ಗಟ್ಟು ಜಿಎಸ್ಟಿ ವಿಚಾರದಲ್ಲಿ ಮುರಿದಿದೆ.
ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಜಿಎಸ್ಟಿ ಚಾಲನೆಯ ಮಧ್ಯರಾತ್ರಿ ಅಧಿವೇಶನದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿತ್ತು. ಅದರ ನಿಲುವನ್ನೇ ಇತರ ಪ್ರತಿಪಕ್ಷಗಳು ಅನುಸರಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಈ ನಿರೀಕ್ಷೆ ಸುಳ್ಳಾಗಿದ್ದು ಸಮಾಜವಾದಿ, ಬಿಎಸ್ಪಿ, ಎನ್ಸಿಪಿ, ಜೆಡಿಯುಗಳು ಅಧಿವೇಶನದಲ್ಲಿ ಭಾಗವಹಿಸಿವೆ.
ಕೇವಲ ಟಿಎಂಸಿ, ಎಡ ಪಕ್ಷಗಳು, ಆರ್ಜೆಡಿ, ಡಿಎಂಕೆ ಮಾತ್ರ ಕಾಂಗ್ರೆಸ್ನ್ನು ಅನುಸರಿಸಿ ಅಧಿವೇಶನ ತೊರೆದಿವೆ. ತಮ್ಮ ನಿಲುವನ್ನು ಬಹಿರಂಗಗೊಳಿಸದೇ ಇದ್ದ ಬಿಜೆಡಿ ಮತ್ತು ಟಿಆರ್ಎಸ್ ಅಧಿವೇಶನದಲ್ಲಿ ಭಾಗವಹಿಸಿವೆ.
ಪ್ರತಿಪಕ್ಷಗಳ ಈ ಧೋರಣೆ ಕಾಂಗ್ರೆಸ್ನ್ನು ತೀವ್ರ ಮುಖಭಂಗವನ್ನು ಉಂಟುಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.