ಮುಂಬಯಿ: ರಾಷ್ಟ್ರಪತಿ ಚುನಾವಣೆ ಸಮೀಪಿಸುತ್ತಿದೆ. ದೇಶದ ಮುಂದಿನ ಪ್ರಥಮ ಪ್ರಜೆ ಯಾರಾಗಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದೆ. ಎನ್ಡಿಎ ಅಭ್ಯರ್ಥಿ ರಾಮ್ನಾಥ್ ಕೋವಿಂದ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ಮೀರಾ ಕುಮಾರ್ ನಡುವೆಯೇ ಚರ್ಚೆಗಳು ಕೇಂದ್ರಿತವಾಗಿದೆ. ಆದರೆ ವಿಶೇಷವೆಂಬಂತೆ ಮುಂಬಯಿ ದಂಪತಿಗಳು ಕೂಡ ರಾಷ್ಟ್ರಪತಿ ಹುದ್ದೆಯ ಆಕಾಂಕ್ಷಿಗಳ ಸಾಲಿನಲ್ಲಿದ್ದಾರೆ.
ಸಾಮಾಜಿಕ ಕಾರ್ಯಕರ್ತರಾದ ಮೊಹಮ್ಮದ್ ಪಟೇಲ್ ಮತ್ತು ಸೈರಾ ಪಟೇಲ್ ದೇಶದ ರಾಷ್ಟ್ರಪತಿಗಳಾಗುವ ಆಶಯ ಹೊಂದಿದ್ದು, ಅದಕ್ಕೆ ಬೇಕಾದ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಗುರುವಾರ ತಮ್ಮ ನಾಮಪತ್ರ ಪರಿಶೀಲನಾ ಹಂತವನ್ನು ಯಶಸ್ವಿಗೊಳಿಸಲಿದೆ ಎಂಬ ನಂಬಿಕೆ ಇವರಿಗಿದೆ.
೩೫ ವರ್ಷ ದಾಟಿದ, ಸರ್ಕಾರಿ ಹುದ್ದೆಯಲ್ಲಿರದ ಎಲ್ಲಾ ಭಾರತೀಯನಿಗೂ ರಾಷ್ಟ್ರಪತಿಯಾಗುವ ಅರ್ಹತೆಯನ್ನು ನಮ್ಮ ಪ್ರಜಾಪ್ರಭುತ್ವ ನಮಗೆ ನೀಡಿದೆ. ಇದರ ಬಗ್ಗೆ ಎಲ್ಲರಿಗೂ ಅರಿವು ಮೂಡಿಸಬೇಕು ಎಂಬ ಉದ್ದೇಶದಿಂದ ಈ ದಂಪತಿ ಪ್ರತ್ಯೇಕವಾಗಿ ರಾಷ್ಟ್ರಪತಿ ಚುನಾವಣೆ ಎದುರಿಸಲು ಬಯಸುತ್ತಿದ್ದಾರೆ.
ನಾಮಪತ್ರ ಸಲ್ಲಿಸಲು 15,000 ಸಾವಿರ ಡಿಪೋಸಿಟ್ ಇಡಬೇಕು ಮತ್ತು ಅರ್ಹ 50 ಮತದಾರರು ಮೊದಲ ಪ್ರಸ್ತಾಪಕರಾಗಬೇಕು ಮತ್ತು 50 ಮಂದಿ ಎರಡನೇ ಪ್ರಸ್ತಾಪಕರಾಗಬೇಕು. ಈ ಸದಸ್ಯರು ವಿಧಾನಸಭಾ ಅಥವಾ ಲೋಕಸಭೆಯ ಸದಸ್ಯರಾಗಿರಬೇಕು. ಇದು ಈ ದಂಪತಿಗಳಿಗೆ ದೊಡ್ಡ ಸವಾಲಾಗಿದೆ. ಆದರೂ ಇವರು ಸ್ಥಳಿಯ ಎಂಪಿ, ಎಂಎಲ್ಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.
ಅದೇನೆಯಿರಲಿ ಸಂವಿಧಾನ ನಮಗೆ ಕಲ್ಪಿಸಿರುವ ಅವಕಾಶವನ್ನು ಬಳಸಿ ದೇಶದ ಅತ್ಯುನ್ನತ ಸ್ಥಾನವನ್ನು ಅಲಂಕರಿಸಲು ಈ ದಂಪತಿಗಳು ನಡೆಸುತ್ತಿರುವ ಪ್ರಯತ್ನಕ್ಕೆ ಭೇಷ್ ಎನ್ನಲೇಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.