ನವದೆಹಲಿ: ಹಿಂಸಾಚಾರದಲ್ಲಿ ಮುಳುಗಿರುವ ಜಮ್ಮು ಕಾಶ್ಮೀರಕ್ಕೆ ಈದ್ ಹಬ್ಬದ ಪ್ರಯುಕ್ತ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಶಾಂತಿ ಸಂದೇಶವನ್ನು ನೀಡಿದ್ದಾರೆ.
ವೀಡಿಯೋ ಮೆಸೇಜ್ ಮಾಡಿರುವ ಅವರು, ‘ಕಾಶ್ಮೀರದ ಎಲ್ಲಾ ಸಹೋದರ, ಸಹೋದರಿಯರಿಗೂ, ಹಿರಿಯರಿಗೂ, ಮಕ್ಕಳಿಗೂ ಈದ್ ಮುಬಾರಕ್’ ಎಂದಿದ್ದಾರೆ.
ಈ ಮಾನವೀಯತೆಯ ಹಬ್ಬ ಶಾಂತಿ, ಸಹಬಾಳ್ವೆ ಮತ್ತು ಸ್ನೇಹತೆಯನ್ನು ಕಣಿವೆ ರಾಜ್ಯಕ್ಕೆ ತರುತ್ತದೆ ಎಂಬ ಭರವಸೆ ನನಗಿದೆ ಎಂದಿದ್ದಾರೆ.
ಉಪವಾಸ ಮಾಸ ರಂಜಾನ್ನ ಕೊನೆಗೆ ಈದ್ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬ ಸದಾ ಕಲ್ಲು ತೂರಾಟ, ರಕ್ತಪಾತದಲ್ಲಿ ಮುಳುಗಿರುವ ಕಾಶ್ಮೀರವನ್ನು ಶಾಂತಿಯತ್ತ ಮರಳಿಸುತ್ತದೆ ಎಂಬ ನಂಬಿಕೆಯನ್ನು ರಾಜನಾಥ್ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.