ನವದೆಹಲಿ: ರಾಷ್ಟ್ರಪತಿ ಚುನಾವಣೆಯನ್ನು ಜಿದ್ದಾಜಿದ್ದಿನ ರಾಜಕೀಯವನ್ನಾಗಿ ಮಾಡುವ ಬದಲು ಕಾಂಗ್ರೆಸ್ 2019ರ ಚುನಾವಣೆಯತ್ತ ಗಮನ ನೀಡಬೇಕು ಎಂದು ಜೆಡಿಯು ಕಿವಿಮಾತು ಹೇಳಿದೆ.
ಎನ್ಡಿಎ ರಾಷ್ಟ್ರಪತಿ ಅಭ್ಯರ್ಥಿಗೆ ತಮ್ಮ ನಾಯಕ ನಿತೀಶ್ ಕುಮಾರ್ ಬೆಂಬಲ ನೀಡಿರುವುದನ್ನು ಸಮರ್ಥಿಸಿಕೊಂಡಿರುವ ಜೆಡಿಯು, ಬಿಹಾರ ಗವರ್ನರ್ ಆಗಿ ರಾಮ್ನಾಥ್ ಕೋವಿಂದ್ ಅವರು ಸಾಂವಿಧಾನಿಕ ಹುದ್ದೆಯನ್ನು ನಿಭಾಯಿಸುತ್ತಿರುವ ರೀತಿ, ಅವರ ಅರ್ಹತೆಯನ್ನು ಗಮನಿಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದಿದೆ.
‘ಈ ನೆಲದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯನ್ನು ನಿಭಾಯಿಸಲು ಕೋವಿಂದ್ ಅತ್ಯುತ್ತಮ ವ್ಯಕ್ತಿ’ ಎಂದು ಜೆಡಿಯು ನಾಯಕ ಪವಣ್ ಕುಮಾರ್ ಹೇಳಿದ್ದಾರೆ.
ಬಿಹಾರದ ಮಗಳು ಮೀರಾ ಕುಮಾರ್ ಅವರ ಗೆಲುವು ಖಚಿತವಾಗಿದ್ದಾಗ ಮಾತ್ರ ಅವರನ್ನು ಪತ್ರಿಪಕ್ಷಗಳು ನಾಮ ನಿರ್ದೇಶನಗೊಳಿಸಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.