News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮೇ19ರಂದು ಕೈರಂಗಳದಲ್ಲಿ ಅಡಕೆ ಬಹುಕೃಷಿ ಬೆಳೆ ವಿಚಾರ ವಿನಿಮಯ

Mangalore NEWSಮಂಗಳೂರು: ವಿಟ್ಲ ಕೇಂದ್ರಿಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ ಮತ್ತು ಕೈರಂಗಳ ವ್ಯವಸಾಯ ಸೇವಾ ಸಹಕಾರಿ ಸಂಘ ಸಹಯೋಗದಲ್ಲಿ ಬಂಟ್ವಾಳ ತಾಲೂಕು ಬಾಳೆಪುಣಿ ಗ್ರಾಮದ ಚಕ್ರಕೋಡಿ ಮಹೇಶ್ ಚೌಟ ಅವರ ತೋಟದಲ್ಲಿ ಮೇ 19ರಂದು ಮಂಗಳವಾರ ಬೆಳಗ್ಗೆ ಗಂಟೆ ೧೦ರಿಂದ ಅಡಕೆಯೊಂದಿಗೆ ಬಹು ಬೆಳೆ ಕೃಷಿ ಪದ್ಧತಿ ಹಾಗೂ ಸಸ್ಯ ಸಂರಕ್ಷಣಾ ವಿಷಯದ ಕುರಿತು ಒಂದು ದಿನದ ಕಾರ್ಯಗಾರ ಏರ್ಪಡಿಸಲಾಗಿದೆ.

ಇಂದಿನ ದಿನಗಳಲ್ಲಿ ಸುಧಾರಿತ ಅಡಕೆ ಕೃಷಿ ಪದ್ಧತಿಯ ಸಮಗ್ರ ಮಾಹಿತಿ, ವಿವಿಧ ತಳಿಗಳ ವಿಶ್ಲೇಷಣೆ, ಕೊಳೆ ರೋಗ ನಿಯಂತ್ರಣ ಮತ್ತು ಅಡಕೆ ತೋಟದಲ್ಲಿ ಇತರ ಲಾಭದಾಯಕ ಕೃಷಿ ಸಾಧ್ಯತೆಗಳ ಬಗ್ಗೆ ಸಂವಾದ ನಡೆಯಲಿದ್ದು ವಿಟ್ಲ ಸಿಪಿಸಿಆರ್ ಐ ಪ್ರಾದೇಶಿಕ ಕೇಂದ್ರದ ಕೃಷಿ ವಿಜ್ಞಾನಿ ಡಾ.ನಾಗರಾಜ್, ಹಿರಿಯ ಸಹಾಯಕರಾದ ಪುರದಂರ ಅವರ ಸಹಿತ ಅಡಕೆ ಕೃಷಿಯ ಪರಿಣಿತರು, ಪ್ರಗತಿಪರ ಅಡಕೆ ಕೃಷಿಕರು ಭಾಗವಹಿಸಲಿದ್ದಾರೆ.

ಬಾಳೆಪುಣಿ, ಕೈರಂಗಳ, ನರಿಂಗಾನ ಗ್ರಾಮಗಳ ಅಡಕೆ ಕೃಷಿಕರು ಸಂವಾದದಲ್ಲಿ ಭಾಗವಹಿಸಲಿದ್ದು, ಇತರ ಗ್ರಾಮಗಳ ಆಸಕ್ತ ಕೃಷಿಕರು ಕೂಡ ಸಂವಾದದಲ್ಲಿ ಭಾಗವಹಿಸುವಂತೆ ಸಂಘಟಕರು ವಿನಂತಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಆಸಕ್ತರು ಚಕ್ರಕೋಡಿ ಮಹೇಶ್ ಚೌಟ ಅವರನ್ನು ಮೊಬೈಲ್ ಸಂಖ್ಯೆ 94496-63893  ಮೂಲಕ ಸಂಪರ್ಕಿಸಬಹುದು.

Tags:

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top