News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಆಳ್ವಾಸ್‍ನ 26 ವಿದ್ಯಾರ್ಥಿಗಳು ಐಐಟಿಗೆ ಆಯ್ಕೆ

ಮೂಡುಬಿದಿರೆ: ಆಳ್ವಾಸ್ ಪದವಿಪೂರ್ವ ಕಾಲೇಜಿನ 26 ಮಂದಿ ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್ 2017 ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಐಐಟಿಗೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ್ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಿಆರ್‍ಎಲ್ ವಿಭಾಗದಲ್ಲಿ ಆಳ್ವಾಸ್ ಎಂ.ಚೇತನ್, ಶಶಾಂಕ್.ಯು, ಯಶಸ್ ಎಚ್.ಎಲ್, ವೈಭವ್ ವಿ.ಅಥಣಿ, ಮೃತ್ಯಂಜಯ ರಾಜೇಂದ್ರ, ಒಬಿಸಿ ವಿಭಾಗದಲ್ಲಿ ವೈಭವ್ ವಿ.ಅಥಣಿ, ವಿಕಾಸ್ ಜಿ.ಎಸ್, ಶಶಾಂಕ್ ಎಸ್., ಶ್ರವಣ್ ವೈ.ಆರ್, ಶ್ವಾಸ್ ಎ., ಶಿವಕುಮಾರ್ ವಿ.ಕೆ, ಸ್ನೇಹಲ್ ಆರ್.ಎಲ್, ಹೇಮಂತ್ ಕೆ.ಎಸ್, ಎಸ್.ಸಿ ವಿಭಾಗದಲ್ಲಿ ರಂಜಿತ್.ಕೆ, ನಾಗರಾಜ, ರವಿ ಕಿರಣ್ ಆರ್.ಟಿ, ಸುರೇಶ್ ವಿ., ಎಸ್‍ಟಿ ವಿಭಾಗದಲ್ಲಿ ಉಜ್ವಲ್ ಎಚ್.ಪಿ, ಕೆ.ಸಾಕ್ಷಿ, ವಿಷ್ಣು ಪ್ರಸಾದ್ ಟಿ.ಆರ್, ಆಕಾಶ್, ಎಸ್‍ಟಿ ಪ್ರಿಪರೇಟರಿ ವಿಭಾಗದಲ್ಲಿ ನಿತಿನ್ ಬಿ., ಪವನ್.ಡಿ, ವರ್ಷಿತಾ ಎಸ್.ಎಂ, ಪ್ರತೀಕ್ ಡಿ.ಪಿ, ದೀಪಾ ಎಸ್.ಚಿಂಗಾರಿ, ಸುಪ್ರಜಾ ಕೆ.ಎಸ್ ಆಯ್ಕೆಯಾದ ಆಳ್ವಾಸ್‍ನ ವಿದ್ಯಾರ್ಥಿಗಳು. ವಿದ್ಯಾರ್ಥಿಗಳ ಸಾಧನೆ, ಅವರನ್ನು ತರಬೇತಿಗೊಳಿಸಿದ ಆಳ್ವಾಸ್ ಸಂಸ್ಥೆಯ ಪರಿಣಿತರ ಯೋಜನೆಗಳು ಹೆಮ್ಮೆ ತಂದಿದೆ ಎಂದು ಡಾ.ಮೋಹನ ಆಳ್ವ ಹರ್ಷ ವ್ಯಕ್ತಪಡಿಸಿದ್ದಾರೆ.

ಆಳ್ವಾಸ್ ಸಂಸ್ಥೆಯ ಪಿಆರ್‍ಒ ಡಾ.ಪದ್ಮನಾಭ ಶೆಣೈ, ಐಐಟಿ ಕೋಚಿಂಗ್ ವಿಭಾಗದ ಮುಖ್ಯಸ್ಥ ಗಣನಾಥ ಶೆಟ್ಟಿ, ಅಶ್ವತ್ಥ್ ಎಸ್.ಎಲ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top