ಮುಂಬೈ : ಬೃಹನ್ಮುಂಬಯಿ ಮುನ್ಸಿಪಲ್ ಕಾರ್ಪೊರೇಷನ್ನ ಬ್ರಾಂಡ್ ಅಂಬಾಸಿಡರ್ ಆಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಬಯಲು ಶೌಚದ ವಿರುದ್ಧ ಸಕ್ರಿಯ ಅಭಿಯಾನವನ್ನು ನಡೆಸುತ್ತಿದ್ದಾರೆ.
ಇತ್ತೀಚೆಗೆ ಮುನ್ಸಿಪಲ್ ಕಮೀಷನರ್ ಅಜಯ್ ಮೆಹ್ತಾ ಅವರೊಂದಿಗೆ ಆರೆ ಕಾಲೋನಿಗೆ ಭೇಟಿ ನೀಡಿದ ಸಲ್ಮಾನ್ ಅಲ್ಲಿನ ನೈರ್ಮಲ್ಯ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು. ಈ ಪ್ರದೇಶಕ್ಕೆ ಇದು ಅವರ 2ನೇ ಭೇಟಿಯಾಗಿದೆ.
ಈ ವೇಳೆ ಮಾತನಾಡಿದ ಅವರು, ನಾವು ಒಟ್ಟು 3 ಸಾವಿರ ಮನೆಗಳ ಶೌಚಾಲಯಗಳನ್ನು ಮರು ನಿರ್ಮಿಸಿದ್ದೇವೆ ಮತ್ತು ಉತ್ತಮ ನೀರಿನ ಸಂಪರ್ಕವನ್ನು ಒದಗಿಸಿದ್ದೇವೆ. ಉತ್ತಮ ಕಾರ್ಯಕ್ಕಾಗಿ ಕೊಡುಗೆ ನೀಡುವುದು ಸಂತೋಷವೆನಿಸುತ್ತದೆ. ಆದರೆ ಇದು ನಮ್ಮ ಕಾರ್ಯದ ಆರಂಭವಷ್ಟೇ ಎಂದು ಅವರು ಹೇಳಿದ್ದಾರೆ.
ಈಗಾಗಲೇ 3 ಸಾವಿರ ಮನೆಗಳ ಶೌಚಾಲಯಗಳನ್ನು ಮರು ನಿರ್ಮಾಣ ಮಾಡಿದ್ದು, ಉಳಿದ ಮನೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಅನುಮತಿ ಪಡೆಯುತ್ತೇವೆ ಎಂದಿದ್ದಾರೆ.
ಸಲ್ಮಾನ್ ಅವರು 6 ಸೀಟುಗಳಿರುವ 5 ಮೊಬೈಲ್ ಟಾಯ್ಲೆಟ್ಗಳನ್ನು ಮುಂಬೈ ಮಹಾನಗರ ಪಾಲಿಕೆಗೆ ಕೊಡುಗೆಯಾಗಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.