ಮಾಸ್ಕೋ: ಜಗತ್ತಿಗೆ ಕಡೆಗೂ ಹಿಂದೂಗಳ ಬಗ್ಗೆ ತಿಳಿಯಿತು. ಪುರಾತನ ತತ್ತ್ವಜ್ಞಾನವನ್ನು ಹೊಂದಿರುವ ಹಿಂದುತ್ವಕ್ಕೆ ಸರಿಸಾಟಿ ಇಲ್ಲ ಎಂಬುದನ್ನು ಜಗತ್ತಿನ ವಿಶ್ವ ನಾಯಕರು ಅರಿಯುವಂತಾಗಿದೆ. ಇಂದು ಇಡೀ ಜಗತ್ತೇ ಭಾರತೀಯ ಮೌಲ್ಯಗಳನ್ನು ಗುರುತಿಸುವಂತಾಗಿದೆ.
ಒಂದೆಡೆ ಭಾರತದಲ್ಲಿಯೇ ಒಬ್ಬ ಹಿಂದುತ್ವವನ್ನು ಟೀಕಿಗೆ ಗುರಿ ಮಾಡುತ್ತಿರುವ ಕಾಲದಲ್ಲಿ, ನೂರಾರು ವಿದೇಶಿಯರು ಹಿಂದುತ್ವದೆಡೆಗೆ ಆಕರ್ಷಿತರಾಗುತ್ತಿದೆ. ಹಿಂದುತ್ವ ಎನ್ನುವುದು ಕೇವಲ ಗೋಮಾತೆಯನ್ನು ಪೂಜಿಸುವುದು, ಅಥವಾ ಶ್ರೀರಾಮ ಜಪ ಮಾಡುವುದಲ್ಲ. ಹಿಂದುತ್ವ ಎನ್ನುವುದು ಸಂತೋಷವಾದ ಜೀವನವನ್ನು ಅರಿಯುವುದಕ್ಕಿರುವ ಕೈಪಿಡಿ.
ಇಷ್ಟರವರೆಗೆ ಭಾರತದ ಬಗ್ಗೆ ಕಾಳಜಿ ಇರುವವರು ವಿದೇಶಿ ಸಂಸ್ಕೃತಿಯನ್ನು ಅನುಸರಿಸುತ್ತಾ ಬಂದವರು. ಆದರೆ ಇದೀಗ ಮೋದಿ ಹಾಗಲ್ಲ, ಅವರು ಭಾರತದ ಹಿಂದೂ ಸಂಸ್ಕೃತಿಯನ್ನು ಅನುಸರಿಸಿದ್ದಲ್ಲದೆ, ಅವುಗಳ ಮೌಲ್ಯವನ್ನು ಎತ್ತಿ ಹಿಡಿದರು. ಇದರಿಂದಾಗಿ ಇದ್ದಕ್ಕಿದ್ದಂತೆ ಹಿಂದೂಸ್ಥಾನವನ್ನು ಇಡೀ ಜಗತ್ತೇ ಗೌರವಿಸುವಂತಾಯಿತು ಮತ್ತು ನಮ್ಮ ಸಂಸ್ಕೃತಿಯನ್ನು ಗೌರವಿಸಿದ್ದಲ್ಲದೆ, ಅದನ್ನು ಅನುಕರಿಸಲೂ ಮುಂದಾದರು.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಿಂದೂಗಳ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದಾರೆ ಎಂಬುದು ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ ಸಂದರ್ಭ ಅವರಾಡಿದ ಮಾತುಗಳಿಂದ ತಿಳಿದು ಬರುತ್ತದೆ.
ಮೋದಿ ರಷ್ಯಾ ಪ್ರವಾಸದಲ್ಲಿದ್ದ ವೇಳೆ ಪತ್ರಕರ್ತನೊಬ್ಬ ಮೋದಿಯವರಿಗೆ, ‘ಪುಟಿನ್ ಹೇಳುತ್ತಾರೆ, ರಷ್ಯಾ ಎಂದಿಗೂ ಇತರ ರಾಷ್ಟ್ರಗಳ ಚುನಾವಣೆಯಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು. ಇದನ್ನು ನೀವು ನಂಬುತ್ತೀರಾ? ಎಂದು ಪ್ರಶ್ನಿಸಿದ್ದ.
ಇದಕ್ಕೆ ಉತ್ತರಿಸಿದ್ದ ಮೋದಿಯವರು, ‘ನೀವು ಅಮೆರಿಕಾ, ರಷ್ಯಾ, ಜರ್ಮನಿಗಳ ಅಧ್ಯಕ್ಷರ ಬಗ್ಗೆ ಮಾತನಾಡುತ್ತಿದ್ದೀರಿ. ಇಂದು ನೀವು ಅಷ್ಟು ದೊಡ್ಡ ವ್ಯಕ್ತಿಗಳ ಬಗ್ಗೆ ಮಾತನಾಡುತ್ತಿದ್ದೀರಿ. ಇಂತಹವರೆಲ್ಲ ಇರುವಾಗ ನಿಮಗೆ ನನ್ನಂತಹ ವಕೀಲನ ಅಗತ್ಯವಿಲ್ಲ ಎಂದೆನಿಸುತ್ತದೆ’ ಎಂದು ಉತ್ತರಿಸಿದ್ದರು.
ಇದಕ್ಕೆ ಪ್ರತಿಕ್ರಿಯೆ ಎಂಬಂತೆ ನಗುತ್ತಾ ವ್ಲಾಡಿಮಿರ್ ಪುಟಿನ್ ಅವರು ಹಿಂದೂಗಳ ತತ್ವಜ್ಞಾನದ ಬಗ್ಗೆ ಕಾಮೆಂಟ್ ನೀಡಿದ್ದಾರೆ.
‘ಹಿಂದೂವಿನೊಂದಿಗೆ ವ್ಯವಹರಿಸುವುದು ತುಂಬಾ ಕಷ್ಟಕರ. ನೀವು ಅವರನ್ನು ಟ್ರಿಕ್ಗೆ ಒಳಪಡಿಸಲಾರಿರಿ. ಯಾಕೆಂದರೆ ಅವರ ತತ್ವಜ್ಞಾನ ತುಂಬಾ ಪುರಾತನವಾದುದು. ನಾವೆಲ್ಲಾ ಸರಳ ವ್ಯಕ್ತಿಗಳು. ಮನಸ್ಸಿಗೆ ಬಂದದ್ದನ್ನು ನಾವು ಮಾತನಾಡಿ ಬಿಡುತ್ತೇವೆ’ ಎಂದು ಪುಟಿನ್ ಹೇಳಿದ್ದಾರೆ.
ಹಿಂದುತ್ವದ ಪುರಾತನ ತತ್ತ್ವಜ್ಞಾನ ಹಿಂದೂವನ್ನು ಮಹಾನ್ ವ್ಯಕ್ತಿಯನ್ನಾಗಿಸುತ್ತದೆ. ಬರೀ ಹಿಂದುವಾಗಿ ಹುಟ್ಟಿದರಷ್ಟೇ ಸಾಲದು, ಹಿಂದುತ್ವದ ಪುರಾತನ ತತ್ತ್ವವನ್ನು ಪಾಲಿಸಿ, ಆಗ ಮಹಾನ್ ವ್ಯಕ್ತಿತ್ವವುಳ್ಳವರಾಗುವುದಲ್ಲದೆ, ಎಲ್ಲರಿಗೂ ಪ್ರೀತಿಪಾತ್ರರಾಗುತ್ತೀರಿ.
ಪುಟಿನ್ ಅವರು ಹೇಳಿದ್ದನ್ನು ಕೇಳಲು ವೀಡಿಯೋ ನೋಡಿ
source : postcard.news
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.