ನವದೆಹಲಿ: ನಮ್ಮ ಧರ್ಮ ಅಪಾಯದಲ್ಲಿದೆ ಎಂದು ಕೊರುಗುತ್ತಾ ಅಭದ್ರತೆಯಲ್ಲಿ ನರಳಾಡುವವರಿಗೆ ಬಾಲಿವುಡ್ ನಟ ರಣದೀಪ್ ಹೂಡಾ ತಮ್ಮ ಫೇಸ್ಬುಕ್ ಪೋಸ್ಟ್ನಲ್ಲಿ ಕೆಲವು ಕಿವಿಮಾತುಗಳನ್ನು ಹೇಳಿದ್ದಾರೆ. ಅವರ ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತಮ್ಮ ಪೋಸ್ಟ್ನಲ್ಲಿ ಅವರು, ‘ಒಂದು ವೇಳೆ ನೀವು ಮುಸ್ಲಿಮರಾಗಿದ್ದು ಸಾವಿರಾರು ವರ್ಷ ಬದುಕಿದ ದೇಶದಲ್ಲಿ ನಿಮಗೆ ಇದ್ದಕ್ಕಿದಂತೆ ಅಭದ್ರತೆಯ ಭಾವ ಕಾಡಿದರೆ, ಒಂದು ವೇಳೆ ನೀವು ದಲಿತರಾಗಿದ್ದು ಬದುಕಿನ ಎಲ್ಲಾ ಕ್ಷಣದಲ್ಲೂ ಅವಮಾನದ ಭಾವ ನಿಮ್ಮನ್ನು ಕಾಡಿದರೆ, ನೀವು ಹಿಂದೂ ಆಗಿದ್ದು ಗೋವುಗಳು ಎಲ್ಲಾ ಕಡೆಯೂ ಹತ್ಯೆಯಾಗುತ್ತಿದೆ ಎಂದು ನಿಮಗನಿಸಿದರೆ, ನೀವು ಜೈನರಾಗಿದ್ದು ನಿಮ್ಮ ಧಾರ್ಮಿಕತೆ ರಾಜಿ ಮಾಡಿಕೊಳ್ಳುವಂತಾಗಿದೆ ಎಂಬ ಭಾವನೆ ಬಂದರೆ, ನೀವು ಪಂಜಾಬಿಯಾಗಿದ್ದು ಎಲ್ಲಾ ಯುವಕರು ಮಾದಕವ್ಯಸನಿಗಳು ಎಂದು ನಿಮಗನಿಸಿದರೆ..
ಸಾಮಾಜಿಕ ಜಾಲತಾಣಗಳಿಂದ ದೂರವಿರಿ, ಸುದ್ದಿಗಳನ್ನು ನೋಡಬೇಡಿ, ಧಾರ್ಮಿಕ ಚರ್ಚೆಗಳಿಂದ ದೂರವಿರಿ..ಕೇವಲ ನಿಮ್ಮ ಸುತ್ತಮುತ್ತ ಇರುವ ಬೇರೆ ಬೇರೆ ಜಾತಿ, ಜನಾಂಗ, ಧರ್ಮಗಳಿಗೆ ಸೇರಿದ ಸ್ನೇಹಿತರನ್ನು ನೋಡಿ. ಆಗ ನಿಮಗೆ ತಿಳಿಯುತ್ತದೆ ನಾನೊಂದು ವಿಶ್ವದ ಶ್ರೇಷ್ಠ ದೇಶದಲ್ಲಿ ಬದುಕುತ್ತಿದ್ದೇನೆ ಎಂದು.
ಹೂಡಾ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಉತ್ತಮ ಪ್ರತಿಕ್ರಿಯೆಗಳನ್ನೂ ಪಡೆದುಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.