ನವದೆಹಲಿ: ಶ್ರೀಲಂಕಾದಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಮತ್ತು ಭೂಕುಸಿತದ ಪರಿಣಾಮವಾಗಿ ಹಲವಾರು ಜೀವ ಹಾನಿ ಸಂಭವಿಸಿದೆ.
ಇಲ್ಲಿನ 13 ಜಿಲ್ಲೆಗಳ ಸುಮಾರು 50 ಸಾವಿರ ಮಂದಿ ನೆರೆಯಿಂದಾಗಿ ಅಪಾಯದಲ್ಲಿದ್ದಾರೆ ಎನ್ನಲಾಗಿದ್ದು, ಈಗಾಗಲೇ 100 ಮಂದಿ ಮೃತಪಟ್ಟಿದ್ದಾರೆ
ಭಾರತ ಈ ದ್ವೀಪ ರಾಷ್ಟ್ರಕ್ಕೆ ಈಗಾಗಲೇ ನೆರವಿನ ಹಸ್ತ ಚಾಚಿದ್ದು, ರಕ್ಷಣಾ ಮತ್ತು ಪರಿಹಾರ ಸಾಮಾಗ್ರಿಗಳನ್ನು ತುಂಬಿದ ನೌಕಾ ಸೇನೆಯ ಹಡಗಳನ್ನು ಕಳಹಿಸಿಕೊಟ್ಟಿದೆ..
ಐಎನ್ಎಸ್ ಕಿರ್ಚ್ ದಕ್ಷಿಣ ಬಂಗಾಳ ಕೊಲ್ಲಿಯ ಮೂಲಕ ಕೊಲಂಬೋವನ್ನು ತಲುಪಲಿದ್ದು ತ್ವರಿತ ನೆರೆ ಪರಿಹಾರ ಕಾರ್ಯದಲ್ಲಿ ನಿರತವಾಗಲಿದೆ.
ಯಾವುದೇ ಸಂದರ್ಭದಲ್ಲೂ ಐಎನ್ಎಸ್ ಕಿರ್ಚ್ ಕೊಲಂಬೋವನ್ನು ತಲುಪಬಹುದು ಎಂದು ಮುಲಗಳು ತಿಳಿಸಿದೆ.
ಅಲ್ಲದೇ ಐಎನ್ಎಸ್ ಜಲಶ್ವಾನ್ ಕೂಡ ಇಂದು ವಿಶಾಖಪಟ್ಟಣಂನಿಂದ ಉಪಹಾರ, ಬಟ್ಟ, ಔಷಧಿ ಮತ್ತು ನೀರುಗಳನ್ನು ಹೊತ್ತು ಶ್ರೀಲಂಕಾಗೆ ತೆರಳಲಿದೆ. ವೈದ್ಯಕೀಯ ಮತ್ತು ಡೈವಿಂಗ್ ತಂಡಗಳೂ ಇದರಲ್ಲಿರಲಿದೆ. ನಾಳೆ ಬೆಳಿಗ್ಗೆ ಹೋಗಿ ತಲುಪುವ ಸಾಧ್ಯತೆ ಇದೆ.
ಕೊಚ್ಚಿಯಿಂದ ಇಂದು ಬೆಳಿಗ್ಗೆ 7 ಗಂಟೆಗೆ ಐಎನ್ಎಸ್ ಶರ್ದುಲ್ ಪರಿಹಾರ ಸಾಮಾಗ್ರಿಗಳನ್ನು ಹೊತ್ತು ಶ್ರೀಲಂಕಾಗೆ ತೆರಳಿದ್ದು, ಇಂದು ರಾತ್ರಿ ತಲುಪಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.