ಗುವಾಹಟಿ: ಎನ್ಡಿಎ ಸರ್ಕಾರಕ್ಕೆ ಮೂರು ವರ್ಷ ತುಂಬಿದ ಹಿನ್ನಲೆಯಲ್ಲಿ ದೇಶದ ಪ್ರಧಾನ ಸೇವಕನಾಗಿ ಕಾರ್ಯ ಮಾಡುವುದಕ್ಕೆ ಅವಕಾಶ ಕಲ್ಪಿಸಿಕೊಟ್ಟ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದಗಳನ್ನು ತಿಳಿಸಿದ್ದಾರೆ. ಅಭಿವೃದ್ಧಿ ಮತ್ತು ಪ್ರಗತಿದಾಯಕ ಹೊಸ ಭಾರತವನ್ನು ಕಟ್ಟುವ ಸಮಯ ಬಂದಿದೆ ಎಂದಿದ್ದಾರೆ.
ಭಾರತದ ಪ್ರತಿ ಮೂಲೆ ಮೂಲೆಯಲ್ಲೂ ಕ್ಷಿಪ್ರ ಅಭಿವೃದ್ಧಿಯನ್ನು ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ. ಪ್ರತಿ ಮೂಲೆಯೂ ನಮಗೆ ದೆಹಲಿ ಇದ್ದಂತೆ. ದೇಶದ ಎಲ್ಲಾ ಭಾಗಗಳೂ ಅರ್ಹ ಗಮನವನ್ನು ಪಡೆದುಕೊಳ್ಳಬೇಕಿದೆ ಎಂದರು.
ಸರ್ಕಾರ ತೆಗೆದುಕೊಂಡ ಎಲ್ಲಾ ನಿರ್ಧಾರಗಳಲ್ಲೂ ತನ್ನನ್ನು ಬೆಂಬಲಿಸಿದ ದೇಶದ 1.25 ಕೋಟಿ ಜನತೆಗೆ ಮೋದಿ ಧನ್ಯವಾದ ತಿಳಿಸಿದರು.
ನೋಟ್ ಬ್ಯಾನ್ ಅತೀ ಕಠಿಣ ನಿರ್ಧಾರವಾಗಿತ್ತು. ಪ್ರತಿಪಕ್ಷಗಳು ಆಕ್ರೋಶವನ್ನು ಸೃಷ್ಟಿಸಲು, ಜನರನ್ನು ಪ್ರಚೋದಿಸಲು ಪ್ರಯತ್ನಿಸಿದವು. ಆದರೆ ಜನರ ಆಶೀರ್ವಾದದಿಂದ ನನ್ನ ಸರ್ಕಾರ ಎಲ್ಲಾ ಸವಾಲುಗಳನ್ನೂ ಎದುರಿಸಿತು ಎಂದರು.
‘ಕಠಿಣ ನಿರ್ಧಾರಗಳ ಹೊರತಾಗಿಯೂ ನಮಗೆ ಬೆಂಬಲಗಳು ಹೆಚ್ಚಾಗುತ್ತಿದೆ. ಆನರು ಈಗ ಬದಲಾವಣೆಗಳನ್ನು ನೋಡಬಹುದಾಗಿದೆ. ದೇಶದ ಪರತಿಯೊಬ್ಬರೂ ನಮ್ಮೊಂದಿಗಿದ್ದಾರೆ. ಕಠಿಣ ಸವಾಲುಗಳನ್ನು ಎದುರಿಸಲು ನಮಗೆ ಬೆಂಬಲ ನೀಡುತ್ತಿದ್ದಾರೆ’ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.