ಗಾಂಧಿನಗರ: ಅಂಬುಲೆನ್ಸ್ ಒಂದಕ್ಕೆ ಜಾಗ ಬಿಟ್ಟುಕೊಡುವ ಸಲುವಾಗಿ ತಮ್ಮ ಬೆಂಗಾವಲುಪಡೆಯ ವಾಹನವನ್ನು ನಿಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ಅತ್ಯುತ್ತಮ ಸಂದೇಶವನ್ನು ರವಾನಿಸಿದ್ದಾರೆ.
ಆಫ್ರಿಕನ್ ಡೆವಲಪ್ಮೆಂಟ್ ಬ್ಯಾಂಕ್ನ ೫೨ನೇ ವಾರ್ಷಿಕ ಸಭೆಯಲ್ಲಿ ಪಾಲ್ಗೊಳ್ಳಲು ಮಂಗಳವಾರ ಗಾಂಧಿನಗರಕ್ಕೆ ಮೋದಿ ಆಗಮಿಸಿದ್ದರು.
ಕಾರ್ಯಕ್ರಮ ಮಗಿಸಿ ತೆರಳುತ್ತಿದ್ದ ಸಂದರ್ಭ ಗಾಂಧಿನಗರ-ಅಹ್ಮದಾಬಾದ್ ರಸ್ತೆಯಲ್ಲಿ ಅಂಬುಲೆನ್ಸ್ನ್ನು ಕಂಡ ಅವರು ತಕ್ಷಣ ತಮ್ಮ ಬೆಂಗಾವಲು ವಾಹನಗಳಿಗೆ ವಾಹನವನ್ನು ಪಕ್ಕಕ್ಕೆ ಸರಿಸಿ ನಿಲ್ಲಿಸುವಂತೆ ಸನ್ನೆ ಮಾಡಿದರು.
ಪ್ರಧಾನಿಯವರು ಅಂಬುಲೆನ್ಸ್ಗೆ ಮೊದಲು ಹೋಗಲು ಅವರು ಅವಕಾಶ ಕಲ್ಪಿಸಿಕೊಟ್ಟರು ಎಂದು ಗುಜರಾತಿ ಮಾಧ್ಯಮಗಳು ವರದಿ ಮಾಡಿವೆ.
ಕಳೆದ ತಿಂಗಳು ವಿಐಪಿ ವಾಹನಗಳಿಂದ ಕೆಂಪು ದೀಪಗಳನ್ನು ತೆಗೆಸಿದ್ದ ಮೋದಿ ಎಲ್ಲಾ ಭಾರತೀಯರೂ ವಿಐಪಿಗಳು ಎಂದು ಹೇಳಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.