ನವದೆಹಲಿ: ಸ್ಚಚ್ಛ ಭಾರತ ಅಪ್ಲಿಕೇಶನ್ಗೆ ಮಂಗಳವಾರ ನ್ಯಾಷನಲ್ ಮ್ಯೂಸಿಯಂನಲ್ಲಿ ಚಾಲನೆ ನೀಡಲಾಗಿದೆ. ಶೀಘ್ರದಲ್ಲೇ ದೇಶದ 116 ಎಎಸ್ಐ ಸ್ಮಾರಕಗಳಲ್ಲಿ ಇದು ಕಾರ್ಯಾರಂಭ ಮಾಡಲಿದ್ದು, ಇಲ್ಲಿಗೆ ಆಗಮಿಸುವ ಪ್ರವಾಸಿಗರು ಇಲ್ಲಿನ ಕಸ-ಕೊಳಚೆಗಳ ಬಗ್ಗೆ ಆಪ್ನಲ್ಲಿ ಮಾಹಿತಿ ನೀಡಬಹುದು.
ಈ ಆಪ್ಗೆ ಸಂಸ್ಕೃತಿ ಸಚಿವ ಮಹೇಶ್ ಶರ್ಮಾ ನ್ಯಾಷನಲ್ ಮ್ಯೂಸಿಯಂನಲ್ಲಿ ಚಾಲನೆ ನೀಡಿದ್ದಾರೆ. ನ್ಯಾಷನಲ್ ಮ್ಯೂಸಿಯಂನ 30 ಗ್ಯಾಲರಿಗಳಲ್ಲಿ ಈಗಾಗಲೇ ಆಪ್ನ್ನು ಕನೆಕ್ಟ್ ಮಾಡುವ ಇಂಟ್ರಾನೆಟ್ ಬಳಸುವ ಡಿವೈಸ್ನ್ನು ಅಳವಡಿಸಲಾಗಿದೆ.
ಇನ್ನು ಕೆಲವೇ ತಿಂಗಳಲ್ಲಿ ಆರ್ಕಿಯಾಲಜಿ ಸರ್ವೇ ಆಫ್ ಇಂಡಿಯಾ 116 ಸ್ಮಾರಕಗಳಲ್ಲಿ ಈ ಡಿವೈಸ್ನ್ನು ಅಳವಡಿಸಲಿದೆ. ಈ ಡಿವೈಸ್ ಬ್ಲೂಟೂತ್ ಬಳಕೆಯ ಮೂಲಕವೂ ಈ ಆಪ್ನ್ನು ಕನೆಕ್ಟ್ ಆಗುತ್ತದೆ.
ಇದರಿಂದಾಗಿ ಇಲ್ಲಿಗೆ ಆಗಮಿಸುವ ಪ್ರೇಕ್ಷಕರು ಆಪ್ ಮೂಲಕ ಸಚಿವಾಲಯಕ್ಕೆ ಇಲ್ಲಿನ ಕಸ ಕೊಳಚೆಗಳ ಬಗ್ಗೆ ಮಾಹಿತಿಯನ್ನು ನೀಡಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.