ನಗ್ರೋಥಾ : ಕಲ್ಲು ತೂರಾಟಗಾರರನ್ನು ಸಮರ್ಥವಾಗಿ ಎದುರಿಸುವ ಸಲುವಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸಿಆರ್ಪಿಎಫ್ ಯೋಧರಿಗೆ ವಿಶೇಷ ತರಬೇತಿಯನ್ನು ನೀಡಲು ಮುಂದಾಗಿದ್ದಾರೆ.
ಕಾನೂನು ಬಾಹಿರವಾಗಿ ಗುಂಪು ಸೇರುವುದನ್ನು ಮತ್ತು ಕಲ್ಲು ತೂರಾಟ ಮಾಡುವುದನ್ನು ತಡೆಗಟ್ಟಲು ಈ ವಿಶೇಷ ತರಬೇತಿಯಲ್ಲಿ ಹೇಳಿಕೊಡಲಾಗುತ್ತದೆ.
ನಾಗರಿಕರ ಜೀವ ಅತ್ಯಂತ ಪ್ರಮುಖವಾಗಿದ್ದು, ಜನಸಮೂಹದ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಲ್ಲು ತೂರಾಟಗಾರರನ್ನು ಎದುರಿಸಲು ತರಬೇತಿ ನೀಡಲಾಗುತ್ತದೆ.
ವಿಶೇಷ ಪೂರ್ವ ನೇಮಕಾತಿ ತರಬೇತಿ ಜಮ್ಮು ಕಾಶ್ಮೀರದ ನಗ್ರೋಥಾ ಮತ್ತು ಹರಿನಗರದಲ್ಲಿ ನಡೆಯುತ್ತಿದೆ.
ಕಾಶ್ಮೀರದಲ್ಲಿ ನಿಯೋಜಿತರಾಗಿರುವ ಸಿಆರ್ಪಿಎಫ್ ಯೋಧರು ಈ ತರಬೇತಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಸಿಆರ್ಪಿಎಫ್ ಯೋಧರು ದೇಶದ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸುತ್ತಾರೆ. ಆದರೆ ಈ ವಿಶೇಷ ತರಬೇತಿ ಕಾಶ್ಮೀರದ ಸನ್ನಿವೇಶವನ್ನು ಎದುರಿಸುವುದಕ್ಕೆಂದೇ ನೀಡಲಾಗುತ್ತದೆ.
ಕಲ್ಲು ತೂರಾಟದಂತಹ ಸನ್ನಿವೇಶವನ್ನು ಎದುರಿಸುವಂತಹ ಸಂದರ್ಭದಲ್ಲಿ ಎಸ್ಒಪಿ SOP (Standard Operating Procedure) ಕ್ರಮಗಳನ್ನು ಅನುಸರಿಸಬೇಕು.
ಎಸ್ಒಪಿ ಎಂದರೆ ಜನಸಮೂಹದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು, ಅವರೊಂದಿಗೆ ಮಾತುಕತೆ ನಡೆಸುವುದು ಮತ್ತು ಅವರು ಮಾಡುತ್ತಿರುವುದು ತಪ್ಪು ಎಂದು ಅವರಿಗೆ ಮನವರಿಕೆ ಮಾಡಿಕೊಡುವುದು, ಜಲಪ್ರಯೋಗ ಮಾಡುವುದು, ಲಾಠಿ ಚಾರ್ಜ್, ರಬ್ಬರ್ ಬುಲೆಟ್ ಬಳಕೆ, ಪಂಪ್ ಆಯಕ್ಷನ್ ಗನ್, ದೇಹದ ಕೆಳ ಭಾಗಕ್ಕೆ ಬುಲೆಟ್ ಹೊಡೆಯುವುದು ಮುಂತಾದ ಪ್ರಕ್ರಿಯೆಗಳನ್ನು ಅನುಸರಿಸಬೇಕಾಗುತ್ತದೆ.
ಈ ಬಗ್ಗೆ ವಿಶೇಷ ತರಬೇತಿಯಲ್ಲಿ ಹೇಳಿಕೊಡಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.