ಗುವಾಹಟಿ : ಸ್ಟಾರ್ಟ್ ಅಪ್ ಇಂಡಿಯಾ ಯೋಜನೆಯ ಮೂಲಕ ಕೇಂದ್ರ ಸರ್ಕಾರವು ಉದ್ಯಮ ಶೀಲತ್ವವನ್ನು ಪ್ರೋತ್ಸಾಹಿಸಿ ಯುವಕರಿಗೆ ಉದ್ಯೋಗ ದೊರೆಯುವಂತೆ ಮಾಡುವ ಮಹತ್ವದ ಕಾರ್ಯವನ್ನು ಆರಂಭಿಸಿದೆ.
ಗುವಾಹಟಿಯ ಯುವಕರ ತಂಡವೊಂದು ಟೆಕ್ ವೇರಿಯೇಬಲ್ ಎಂಬ ಸ್ಟಾರ್ಟ್ ಅಪ್ ಯೋಜನೆಯನ್ನು ಆರಂಭಿಸಿ, ಈಶಾನ್ಯದ ಯುವ ಇಂಜಿನಿಯರ್ಗಳು ಒಂದೆಡೆ ಸೇರುವಂತೆ ಮಾಡಿ, ಅವರಿಂದ ತಂತ್ರಜ್ಞಾನ ಮತ್ತು ನಾವೀನ್ಯ ಐಡಿಯಾಗಳನ್ನು ಹೊರ ತರಿಸುತ್ತಿದೆ.
ಟೆಕ್ ವೇರಿಯೇಬಲ್ನ ಮುಖ್ಯ ಆಪರೇಟಿಂಗ್ ಆಫೀಸರ್ ರತ್ನದೀಪ್ ಭಟ್ಟಾಚಾರ್ಯಜಿ ತಮ್ಮ ಸ್ಟಾರ್ಟ್ ಅಪ್ ಬಗ್ಗೆ ಹೇಳಿಕೊಂಡಿದ್ದು, ‘ನಾನು ಎನ್ಐಐಟಿ ಪದವೀಧರನಾಗಿದ್ದು, ನನ್ನ ಸಹ ಸಂಸ್ಥಾಪಕರು ಟಿಸಿಎಸ್ ಮುಂಬೈ ಮತ್ತು ದೆಹಲಿಯವರು. ನಾವು ನಾಲ್ವರು ಒಟ್ಟಿಗೆ ಸೇರಿ ಈಶಾನ್ಯದಲ್ಲಿ ಸರ್ವಿಸ್ ಬೇಸ್ಡ್ ಕಂಪನಿಯೊಂದನ್ನು ಆರಂಭಿಸಿದೆವು. ಅದುವೇ ಟೆಕ್ ವೇರಿಯೇಬಲ್. ಇದು ಯುವ ಇಂಜಿನಿಯರ್ ಪದವೀಧರರಿಗೆ ಕೋರ್ ಜಾವಾ, ಅಡ್ವಾನ್ಸ್ಡ್ ಜಾವಾ, ಕ್ಲೌಡ್ ಕಂಪ್ಯೂಟಿಂಗ್ನಂತಹ ವಿವಿಧ ತರಬೇತಿಗಳನ್ನು ನೀಡುತ್ತಿದ್ದೇವೆ.
ಇದು ಈಶಾನ್ಯದ ಇಂಜಿನಿಯರ್ ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್ ಮತ್ತು ತರಬೇತಿಯನ್ನು ಪಡೆಯುವ ಬಹುಮುಖ್ಯ ವೇದಿಕೆಯಾಗಿದೆ ಎಂದು ಹೇಳಿದ್ದಾರೆ.
ಟೆಕ್ ವೇರಿಯೇಬಲ್ ಸಂಸ್ಥೆಯು ಉದ್ಯೋಗಾಕಾಂಕ್ಷಿಗಳಿಗಾಗಿ ನೇಮಕಾತಿ ಪ್ರಕ್ರಿಯೆಯನ್ನೂ ನಡೆಸುತ್ತದೆ. ಇದು ಅವರ ಸೃಜನಶೀಲತ್ವವನ್ನು ಉತ್ತೇಜಿಸುತ್ತದೆ. ತಂತ್ರಜ್ಞಾನದಲ್ಲಿ ಅವರ ವೃತ್ತಿಯನ್ನು ನಿರ್ಮಾಣ ಮಾಡುತ್ತದೆ.
ನಾವು ಇಂಜಿನಿಯರಿಂಗ್ ಕಾಲೇಜಿನಲ್ಲಿ ಏನನ್ನು ಕಲಿಯುತ್ತೇವೆಯೋ, ಅದು ಉದ್ಯೋಗ ಪಡೆಯಲು ಸಾಕಾಗುವುದಿಲ್ಲ. ಅದಕ್ಕೆ ಬೇಕಾದ ತರಬೇತಿ, ಕೌಶಲ್ಯವನ್ನು ನಾವು ವೃದ್ಧಿ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಟೆಕ್ ವೇರಿಯೇಬಲ್ ಉತ್ತಮ ಕಾರ್ಯ ಮಾಡುತ್ತದೆ ಎಂದು ರತ್ನದೀಪ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.