ನವದೆಹಲಿ: ಲಷ್ಕರ್ ಇ ತೋಯ್ಬಾ ಮುಖ್ಯಸ್ಥ ಹಫೀಜ್ ಸಯೀದ್ ಮತ್ತು ಇತರ ಪಾಕಿಸ್ಥಾನಿ ಸಂಘಟನೆಗಳು ಹುರಿಯತ್ ನಾಯಕರಿಗೆ ಹಣವನ್ನು ನೀಡುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳವು ಶುಕ್ರವಾರ ಪ್ರಾಥಮಿಕ ತನಿಖೆಯನ್ನು ಆರಂಭಿಸಿದೆ.
ಹುರಿಯತ್ಗೆ ಬರುತ್ತಿರುವ ಹಣಕಾಸು ನೆರವಿನ ಬಗ್ಗೆ ತನಿಖೆ ನಡೆಸಲು ಈಗಾಗಲೇ ರಾಷ್ಟ್ರೀಯ ತನಿಖಾ ದಳದ ಹಿರಿಯ ಅಧಿಕಾರಿಗಳು ಶ್ರೀನಗರವನ್ನು ತಲುಪಿದ್ದಾರೆ ಎನ್ನಲಾಗಿದೆ.
ಕಲ್ಲು ತೂರಾಟ, ಹಿಂಸಾಚಾರದಂತಹ ಕೃತ್ಯಗಳನ್ನು ಕಾಶ್ಮೀರ ಕಣಿವೆಯಲ್ಲಿ ನಡೆಸುವ ಸಲುವಾಗಿ ಪಾಕ್ ಉಗ್ರ ಸಂಘಟನೆಗಳು ಹುರಿಯತ್ನ ನಾಯಕರಿಗೆ ಹಣ ನೀಡುತ್ತಿವೆ ಎಂಬ ಆರೋಪ ಮಾಧ್ಯಮಗಳ ಸ್ಟಿಂಗ್ ಆಪರೇಶನ್ ಮೂಲಕ ಸಾಬೀತಾಗಿತ್ತು. ಈ ಹಿನ್ನಲೆಯಲ್ಲಿ ತನಿಖೆ ನಡೆಸಲಾಗುತ್ತಿದೆ.
ಮಕ್ಕಳನ್ನು ಶಾಲೆಗೆ ಕಳುಹಿಸಬೇಡಿ, ಇದರಿಂದ ಮುಂದಿನ ಪೀಳಿಗೆ ನಮ್ಮ ಧರ್ಮ ಹಾಗೂ ಸಂಸ್ಕೃತಿಯಿಂದ ದೂರ ಉಳಿಯಬಹುದು ಎಂದು ಈ ಪ್ರತ್ಯೇಕತಾವಾದಿ ನಾಯಕರು ಕಾಶ್ಮೀರಿಗರಿಗೆ ಪ್ರತಿಪಾದಿಸುತ್ತಾರೆ. ಆದರೆ ಇವರ ಮಕ್ಕಳು ಉನ್ನತ ಶಿಕ್ಷಣ ಪಡೆದು ವಿದೇಶಗಳಲ್ಲಿ ನೆಲೆಯೂರಿದ್ದಾರೆ ಎಂದು ಸ್ಟಿಂಗ್ ಆಪರೇಶನ್ನಲ್ಲಿ ಬಯಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.