ದ ಹೇಗ್ : ಪಾಕಿಸ್ಥಾನದಲ್ಲಿ ಮರಣದಂಡನೆ ಶಿಕ್ಷೆಗೆ ಒಳಗಾಗಿರುವ ಭಾರತದ ಮಾಜಿ ನೌಕಾ ಸೇನಾಧಿಕಾರಿ ಕುಲಭೂಷಣ್ ಜಾದವ್ ಅವರ ಶಿಕ್ಷೆಯನ್ನು ಅಮಾನತುಪಡಿಸುವಂತೆ ಇಂಟರ್ನ್ಯಾಷನಲ್ ಕೋರ್ಟ್ ಆಫ್ ಜಸ್ಟೀಸ್ನಲ್ಲಿ ಭಾರತ ತನ್ನ ವಾದವನ್ನು ಮುಕ್ತಾಯ ಮಾಡಿದೆ. ಪಾಕಿಸ್ಥಾನ ಇನ್ನಷ್ಟೇ ತನ್ನ ವಾದವನ್ನು ಮುಂದಿಡಬೇಕಾಗಿದೆ.
ದ ಹೇಗ್ ಮೂಲದ ಇಂಟರ್ ನ್ಯಾಷನಲ್ ಕೋರ್ಟ್ ಆಫ್ ಜಸ್ಟೀಸ್ ಈಗಾಗಲೇ ಜಾದವ್ ಪ್ರಕರಣದ ವಿಚಾರಣೆಯನ್ನು ಆರಂಭಿಸಿದ್ದು, ಭಾರತವು ಪಾಕಿಸ್ಥಾನವು ಕುಲ್ಭೂಷಣ್ ಅವರ ಮಾನವ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ವಾದಿಸಿದೆ.
ವಕೀಲ ಹರೀಶ್ ಸಾಲ್ವೆ ಅವರು ಐಸಿಜೆನಲ್ಲಿ ಭಾರತದ ತಂಡವನ್ನು ಮುನ್ನಡೆಸಿದ್ದು, ಕುಲಭೂಷಣ್ ಜಾದವ್ ಅವರ ಶರಣಾಗತಿಯ ಹೇಳಿಕೆಗಳನ್ನು ಪಾಕಿಸ್ಥಾನವೇ ಬಲವಂತದಿಂದ ಹೇಳಿಸಿದ್ದು. ಪ್ರಸ್ತುತ ಯಾದವ್ ಅವರು ಪಾಕಿಸ್ಥಾನ ಮಿಲಿಟರಿ ಕಸ್ಟಡಿಯಲ್ಲಿದ್ದಾರೆ. ಅಲ್ಲದೆ ನ್ಯಾಯಾಲಯ ತನ್ನ ತೀರ್ಪನ್ನು ಪ್ರಕಟಿಸುವ ಮೊದಲೇ ಅವರು ಗಲ್ಲಿಗೇರಲ್ಪಡುವ ಭಯವನ್ನು ಅವರು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಈ ವಿಷಯ ತ್ವರಿತವಾಗಿದ್ದು, ಶೀಘ್ರದಲ್ಲೇ ತೀರ್ಪು ಪ್ರಕಟಿಸಬೇಕು ಎಂದು ಅವರು ಅಂತಾರಾಷ್ಟ್ರೀಯ ಕೋರ್ಟ್ನ್ನು ಕೇಳಿಕೊಂಡಿದ್ದಾರೆ.
2016 ರಲ್ಲಿ ಜಾದವ್ ಅವರು ಇರಾನ್ನಲ್ಲಿ ಅಪಹರಣಕ್ಕೊಳಪಟ್ಟಿದ್ದು ಅವರನ್ನು ಪಾಕಿಸ್ಥಾನಕ್ಕೆ ಕರೆತರಲಾಯಿತ್ತು. ಬಳಿಕ ಅವರನ್ನು ಭಾರತದ ಬೇಹುಗಾರ ಎಂದು ಬಿಂಬಿಸಿ ಅವರು ಶರಣಾಗತಿಯ ಹೇಳಿಕೆಯನ್ನು ನೀಡುವಂತೆ ಪಾಕಿಸ್ಥಾನ ಮಿಲಿಟರಿ ಕಸ್ಟಡಿಯಲ್ಲಿ ಒತ್ತಡ ಹೇರಲಾಯಿತು.
ಅವರ ಬಂಧನದ ಬಗ್ಗೆ ಪಾಕಿಸ್ಥಾನ ಭಾರತಕ್ಕೆ ಮಾಹಿತಿಯನ್ನು ನೀಡಿರಲಿಲ್ಲ. ಭಾರತವು ಜಾದವ್ ಅವರ ಮರಣದಂಡನೆಯನ್ನು ಅಮಾನತು ಪಡಿಸುವಂತೆ ಕೋರುತ್ತದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.