ನವದೆಹಲಿ : ದೆಹಲಿಯ ರಾಜ್ಘಾಟ್ನಲ್ಲಿರುವ ಮಹಾತ್ಮಾಗಾಂಧಿ ಸಮಾಧಿಯು ಡಿಜಿಟಲ್ ಟಚ್ ಪಡೆಯಲಿದೆ.
ಕೇಂದ್ರ ನಗರಾಭಿವೃದ್ಧಿ ಸಚಿವಾಲಯದ ಅನುಮೋದನೆ ಪಡೆದ ಬಳಿಕ ಸುಮಾರು 3 ಕೋಟಿ ರೂ.ಗಳ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ನಿರ್ಧರಿಸಲಾಗಿದೆ. ರಾಜ್ಘಾಟ್ನಲ್ಲಿರುವ ಮಹಾತ್ಮಾಗಾಂಧಿ ಸಮಾಧಿಯಲ್ಲಿ ಮಹಾತ್ಮಾಗಾಂಧೀಜಿಯವರ ಜೀವನದ ಸಂವಾದಾತ್ಮಕ ಅನುಭವಗಳು ಮತ್ತು ಅವರ ಕೆಲಸಗಳನ್ನು ತೋರಿಸುವ ಡಿಜಿಟಲ್ ಡಿಸ್ಪ್ಲೇ ಅಳವಡಿಸಲಾಗುವುದು.
ರಾಷ್ಟ್ರಪಿತ ಮಹಾತ್ಮಾಗಾಂಧಿಯವರನ್ನು ನೋಡಲು ಮತ್ತು ಅವರ ಜೀವನವನ್ನು ತಿಳಿಯಲು ಹಲವಾರು ಮಂದಿ ರಾಜ್ಘಾಟ್ಗೆ ಭೇಟಿ ನೀಡುತ್ತಿರುತ್ತಾರೆ. ಅಲ್ಲಿಗೆ ಬರುವವರಿಗೆ ಡಿಜಿಟಲ್ ಅನುಭವ ನೀಡಲು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ.
3 ಡಿಜಿಟಲ್ ಸ್ಕ್ರೀನ್ಗಳನ್ನು ಅಳವಡಿಸಲಾಗುವುದು. ಸಂವಾದ ಕೇಂದ್ರದಲ್ಲಿ ಅವರ ಜೀವನದ ಕುರಿತು ಸಂವಾದಾತ್ಮಕ ಕಲಿಕೆಗಾಗಿ ಸ್ಕ್ರೀನ್ಗಳನ್ನು ಅಳವಡಿಸಲಾಗುವುದು. ರಾಜ್ಘಾಟ್ಗೆ ಭೇಟಿ ನೀಡುವ ದಿವ್ಯಾಂಗರ ಅನುಕೂಲಕ್ಕಾಗಿ ಗ್ರಾನೈಟ್ ಪ್ಲೋರಿಂಗ್ ಮತ್ತು ಇಳಿಜಾರು ದಾರಿಯನ್ನು ಮಾಡಲಾಗುವುದು. ಭೇಟಿ ನೀಡುವವರು ಕುಳಿತುಕೊಳ್ಳಲು ಆಸನ, ಬೆಂಚ್, ಶೌಚಾಲಯ, ಬ್ಯಾರಿಯರ್ಗಳು, ಲೋಟಸ್ ಕೊಳದ ಬಳಿ ಪಾದಚಾರಿ ಮೇಲುಸೇತುವೆಗಳನ್ನು ನಿರ್ಮಿಸಲಾಗುವುದು.
ರಾಜ್ಘಾಟ್ ಸಮಾಧಿ ಕಮಿಟಿಯು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯನಾಯ್ಡು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಅಭಿವೃದ್ಧಿಕಾರ್ಯಗಳಿಗೆ ಅನುಮೋದನೆ ನೀಡಿದೆ. ರಾಜ್ಘಾಟ್ ಸಮಾಧಿ ಕಮಿಟಿಯು ಸಂಸದ ಉದಿತ್ ರಾಜ್, ಮಾಜಿ ಸಂಸದ ಮತ್ತು ಮಹಾತ್ಮಾಗಾಂಧಿಯವರ ಮರಿಮೊಮ್ಮಗ ರಾಜ್ಮೋಹನ್ ಗಾಂಧಿಯವರನ್ನೊಳಗೊಂಡಿದೆ.
46 ಇಂಚ್ ಎಲ್ಇಡಿ ಸ್ಕೀನ್ಗಳಲ್ಲಿ ಮಹಾತ್ಮಾಗಾಂಧಿಯವರ ಜೀವನ, ಅವರ ಕೆಲಸಗಳು, ರಾಷ್ಟ್ರೀಯ ಚಳವಳಿ, ಅವರ ಕುರಿತ ಚಿತ್ರಗಳು ಮತ್ತು ಭಾಷಣಗಳನ್ನು ಪ್ರಸಾರ ಮಾಡಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.